ADVERTISEMENT

ವಾಚಕರ ವಾಣಿ | ಆನೆಗೆ ಅಂಕುಶ: ಸ್ವಭಾವ ಅರಿಯಬೇಕಿದೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 19:30 IST
Last Updated 14 ಆಗಸ್ಟ್ 2020, 19:30 IST

‘ಆನೆಗೆ ಅಂಕುಶ’ ಎಂಬ ವರದಿ (ಪ್ರ.ವಾ‌., ಆ. 14) ಓದಿದಾಗ, ಕಾಡಾನೆಗಳಿಗೆ ಅಂಕುಶ ಹಾಕಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತು. ಆನೆಗಳನ್ನು ನಿಯಂತ್ರಿಸಲು ಸೌರಬೇಲಿ, ಜೇನುಬೇಲಿ, ಪಟಾಕಿ ಸಿಡಿಸುವುದು, ತಡೆಗೋಡೆ ನಿರ್ಮಾಣ ಇನ್ನೂ ಅನೇಕಾನೇಕ ಉಪಾಯಗಳನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ. ಈ ಎಲ್ಲಾ ಉಪಾಯಗಳು ಮನುಷ್ಯನ ಪರವಾಗಿವೆಯೇ ವಿನಾ ಆನೆಗಳ ಪರವಾಗಿ ಇಲ್ಲ. ಅಂದರೆ ಈ ಉಪಾಯಗಳೆಲ್ಲಾ ಆನೆಗಳನ್ನು ಹೇಗೆಲ್ಲಾ ವಿಧ ವಿಧವಾಗಿ ಕೆರಳಿಸಬಹುದು ಎಂಬುದಕ್ಕೆ ಸಹಕಾರಿಯಾಗಿವೆ. ಅಲ್ಲದೆ ಈ ನಿರ್ಬಂಧಗಳನ್ನು ಆನೆಗಳು ಹೇಗೆಲ್ಲಾ ದಾಟಿವೆ ಎಂಬುದನ್ನು ಈ ಹಿಂದೆ ಅವುಗಳೇ ತಿಳಿಸಿಕೊಟ್ಟಿವೆ. ಹಾಗಾಗಿ ಮೂಲಭೂತವಾಗಿ ಆನೆಗಳ ಸ್ವಭಾವವನ್ನು ಅರಿತುಕೊಳ್ಳುವ ಗೋಜಿಗೆ ಹೋಗದೇ ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT