ADVERTISEMENT

ವಾಚಕರ ವಾಣಿ: ಸಾವಿನ ಮನೆಯಲ್ಲೂ ಲಂಚಾವತಾರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 19:30 IST
Last Updated 23 ಸೆಪ್ಟೆಂಬರ್ 2020, 19:30 IST

ಬೆಂಗಳೂರಿನಲ್ಲಿ ನನ್ನ ಆತ್ಮೀಯರೊಬ್ಬರು ಕೋವಿಡ್‌ ರೋಗದಿಂದ ತೀರಿಕೊಂಡರು. ಆಗ ನನಗೆ, ಇಲ್ಲಿರುವ ಭ್ರಷ್ಟಾಚಾರದ ಕೊಳಕು ವ್ಯವಸ್ಥೆಯ ನೇರ ಪರಿಚಯವಾಯಿತು. ಅಂತ್ಯಕ್ರಿಯೆ, ಮರಣ ಪ್ರಮಾಣಪತ್ರ, ಸಂಬಂಧಿಕರ ಕೋವಿಡ್ ಪರೀಕ್ಷೆ ಎಲ್ಲದಕ್ಕೂ ಲಂಚ ಲಂಚ ಲಂಚ! ಲಂಚವಿಲ್ಲದೆ ಏನೂ ನಡೆಯದು.

ಸಾವಿನ ಮನೆಯಲ್ಲೂ ‘ಇಷ್ಟು ಕೊಡಿ’ ಎಂದು ಬಾಯಿಬಿಟ್ಟು ಕೇಳುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೆಲವು ‘ವಾರಿಯರ್‌’ಗಳು! ಇವರಿಗೇನಾ ನಾವು ದೀಪ ಹಚ್ಚಿ, ಚಪ್ಪಾಳೆ ತಟ್ಟಿ ಧನ್ಯವಾದ ಅರ್ಪಿಸಿದ್ದು ಎನಿಸಿ ಜುಗುಪ್ಸೆ, ನೋವು, ಅಸಹ್ಯ ಎಲ್ಲವೂ ಒಟ್ಟಿಗೆ ಉಂಟಾದವು.

–ಶಿವಪ್ರಕಾಶ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.