ಜಗತ್ತಿನಾದ್ಯಂತ ವ್ಯಾಪಿಸಿರುವ ಮಾದಕ ವಸ್ತುಗಳ ಬಗ್ಗೆ ನಾಗೇಶ ಹೆಗಡೆ ಅವರು ‘ಆನಂದಾಮೈಡ್ ಉಕ್ಕಿದರೆ ಸಾಲದೇ’ ಎಂಬ ಲೇಖನದಲ್ಲಿ (ಪ್ರ.ವಾ., ಸೆ. 10) ಬಹಳ ಚೆನ್ನಾಗಿ ತಿಳಿಸಿದ್ದಾರೆ. ಎಷ್ಟೋ ವರ್ಷಗಳಿಂದ ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ದಂಧೆಯನ್ನು, ಅನಿರೀಕ್ಷಿತವಾಗಿ ಜರುಗಿದ ಅಪರಾಧ ಎಂಬಂತೆ ಬಿಂಬಿಸುತ್ತಿರುವುದು ಸೋಜಿಗದ ಸಂಗತಿ.
ಇಷ್ಟು ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬಂದಿರುವ ಈ ದಂಧೆಯ ಬಗ್ಗೆ ಪೊಲೀಸರಿಗೆ ಈಗಷ್ಟೇ ತಿಳಿಯಿತು ಎಂಬಂತೆ ಹೇಳಿಕೆ ಕೊಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು ಬರೀ ಬೆಂಗಳೂರು ನಗರಕ್ಕೆ ಸೀಮಿತವಲ್ಲ ಎಂಬುದನ್ನು ಕೆಜಿಎಫ್ನ ಮನೆಯೊಂದರಲ್ಲಿ ಸಿಕ್ಕಿದ ಗಾಂಜಾ ತೋರಿಸಿದೆ. ನಮ್ಮ ಹಳ್ಳಿಗಳಲ್ಲಿ ಸಹ ಗಾಂಜಾ ಬೆಳೆ ನಾಶಪಡಿಸಿದ ಸುದ್ದಿಯನ್ನು ಆಗಾಗ ಓದುವುದು ಸಾಮಾನ್ಯ ಸಂಗತಿ. ಈಗಲಾದರೂ ಯುವಕರಿಗೆ, ವಿದ್ಯಾರ್ಥಿಗಳಿಗೆ ಮಾದಕವಸ್ತು ಸಿಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ.
- ಡಾ. ಟಿ.ಜಯರಾಂ,ಕೋಲಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.