ADVERTISEMENT

ವಾಚಕರ ವಾಣಿ: ಸಂವಿಧಾನದತ್ತ ಒಕ್ಕೂಟ ತತ್ವಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 19:30 IST
Last Updated 9 ಜೂನ್ 2021, 19:30 IST

‘18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಒಕ್ಕೂಟ ಸರ್ಕಾರದಿಂದಲೇ ಉಚಿತ ಲಸಿಕೆ’ ಎಂಬ ಪ್ರಧಾನಿಯವರ ಇತ್ತೀಚಿನ ಘೋಷಣೆಯು ನಮ್ಮ ಪವಿತ್ರ ಸಂವಿಧಾನ ಪ್ರಣೀತ ಒಕ್ಕೂಟ ತತ್ವಕ್ಕೆ ದೊರೆತ ಜಯವಾಗಿದೆ.

ಸುಪ್ರೀಂ ಕೋರ್ಟ್‌ ಚಾಟಿ ಏಟಿನಿಂದ ಎಂದು ಕೆಲವರು, 13 ರಾಜ್ಯಗಳ ಮುಖ್ಯಮಂತ್ರಿಗಳ ಒತ್ತಾಯದಿಂದ ಎಂದು ಕೆಲವರು, ಉಚಿತ ಲಸಿಕೆ ಘೋಷಣೆಗೂ ನ್ಯಾಯಾಲಯದ ಚಾಟಿ ಏಟಿಗೂ ಸಂಬಂಧವಿಲ್ಲ ಎಂದು ಆಳುವ ಪಕ್ಷ- ಹೀಗೆ ಉಚಿತ ಲಸಿಕೆ ಘೋಷಣೆ ಬಗ್ಗೆ ಯಾರು ಏನೇ ಹೇಳಿದರೂ ಇದು ಪ್ರಧಾನವಾಗಿ ನಮ್ಮ ಒಕ್ಕೂಟ ತತ್ವಕ್ಕೆ ಸಂದ ಜಯವಾಗಿದೆ. ಜೈ ಸಂವಿಧಾನ, ಜೈ ಒಕ್ಕೂಟ ತತ್ವ.→

–ಟಿ.ಆರ್.ಚಂದ್ರಶೇಖರ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.