ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಅವಕಾಶ ನೀಡಲಾಗಿದೆ. ಇದು, ಈ ಕ್ಷಣದ ಅಗತ್ಯ ಇದ್ದಿರಬಹುದು. ಆದರೆ ವೆಚ್ಚವನ್ನು ಸರ್ಕಾರವೇ ಭರಿಸುವುದು ಲೇಸು. ಕೋವಿಡ್-19 ಕಾಯಿಲೆಯು ರಾಷ್ಟ್ರೀಯ ವಿಪತ್ತು. ಇಂದಿನ ದಿನದಲ್ಲಿ ಪ್ರತೀ ನಾಗರಿಕನೂ ಸರ್ಕಾರಕ್ಕೆ ನೇರ ಅಥವಾ ಪರೋಕ್ಷವಾಗಿ ತೆರಿಗೆ ಪಾವತಿಸುತ್ತಾನೆ. ಈ ಹಣವನ್ನು ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಜನರ ಆರೋಗ್ಯ ಕಾಪಾಡಲು ಸರ್ಕಾರ ಬಳಸಬೇಕು. ಕೋವಿಡ್ಗೆ ಇನ್ನೂ ನಿಖರವಾದ ಯಾವುದೇ ಔಷಧಿ ಇಲ್ಲ. ಇಂತಹ ಸಂದರ್ಭದಲ್ಲಿ, ಆರೋಗ್ಯ ರಕ್ಷಣೆಯ ಗುರುತರ ಜವಾಬ್ದಾರಿಯನ್ನು ಸರ್ಕಾರವೇ ನಿಭಾಯಿಸಬೇಕಾಗಿದೆ.
-ಗಣಪತಿ ನಾಯ್ಕ,ಕಾನಗೋಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.