ADVERTISEMENT

ದಿಟ್ಟ ನಿರ್ಧಾರ ತಳೆದದ್ದು ಸ್ವಾರ್ಥಕ್ಕಲ್ಲ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 20:01 IST
Last Updated 9 ಆಗಸ್ಟ್ 2019, 20:01 IST

ಜಮ್ಮು–ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಸರ್ಕಾರ ಅನುಸರಿಸಿದ ಮಾರ್ಗವನ್ನುಡಾ. ಸಿ.ಎನ್.ರಾಮಚಂದ್ರನ್ ಟೀಕಿಸಿದ್ದಾರೆ (ವಾ.ವಾ., ಆ. 9). ಆ ಸಂದರ್ಭದಲ್ಲಿ ಅಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿ, ನಾಯಕರನ್ನು ಗೃಹಬಂಧನದಲ್ಲಿ ಇರಿಸದಿದ್ದರೆ ಅವರು ಗಲಭೆಗೆ ಪ್ರಚೋದನೆ ನೀಡದೆ ಸುಮ್ಮನಿರುತ್ತಿದ್ದರೇ? ರಾಜ್ಯಪಾಲರ ವರದಿಯನ್ನೇ ಕಾಶ್ಮೀರಿಗರ ಸಮ್ಮತಿಯೆಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಆದರೆ ಸಂವಿಧಾನದಲ್ಲಿ, ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕಾಶ್ಮೀರ ಸರ್ಕಾರದ ಸಮ್ಮತಿ ಪಡೆಯಬೇಕು ಎಂದಿದೆಯೇ ಹೊರತು ಚುನಾಯಿತ ಸರ್ಕಾರದ ಸಮ್ಮತಿ ಎಂದು ಹೇಳಿಲ್ಲ. ಹಾಗೊಂದು ವೇಳೆ ಚುನಾಯಿತ ಸರ್ಕಾರದ ಸಮ್ಮತಿ ಪಡೆಯಬೇಕೆಂದಿದ್ದಲ್ಲಿ ಅದು ಸಾಧ್ಯವಿತ್ತೇ?

ಇತರ ಕೆಲ ರಾಜ್ಯಗಳ ವಿಶೇಷ ಸ್ಥಾನಮಾನ ಆ ಭಾಗಗಳ ಅಭಿವೃದ್ಧಿಗೆ ಪೂರಕವಾಗಿದೆಯೇ ಹೊರತು ಮಾರಕವಾಗಿಲ್ಲ. ಸುಮಾರು ಏಳು ದಶಕಗಳ ಕಾಲ ಕಾಶ್ಮೀರದಲ್ಲಿ ರಕ್ತ ಹರಿದದ್ದು, ಭೂಲೋಕದ ಸ್ವರ್ಗವು ಅಲ್ಲಿನ ರಾಜಕಾರಣಿಗಳ ಸ್ವಾರ್ಥದಿಂದ, ಪ್ರತ್ಯೇಕತಾವಾದಿಗಳ ಅಟಾಟೋಪದಿಂದ ನಿತ್ಯ ನರಕವಾಗುವಂತೆ ಆಗಿದ್ದು, ನೆರೆರಾಷ್ಟ್ರವು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಾ ಬಂದದ್ದು ಎಲ್ಲಕ್ಕೂ ಸಂವಿಧಾನದ 370ನೇ ವಿಧಿ ಕಾರಣವಾಯಿತಲ್ಲವೇ? ದಿಟ್ಟ ನಿರ್ಧಾರ ತಳೆದದ್ದು ಯಾವ ಸ್ವಾರ್ಥಕ್ಕೂ ಅಲ್ಲ ಎನ್ನುವುದನ್ನು ಟೀಕಾಕಾರರು ಮರೆಯಬಾರದು.

– ರಾಜಕುಮಾರ ಉಪಾಸೆ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.