ADVERTISEMENT

ಖಾತೆ ಬದಲಾವಣೆ ಎಂಬ ಅರಣ್ಯರೋದನ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 20:00 IST
Last Updated 17 ಫೆಬ್ರುವರಿ 2020, 20:00 IST

ಅರಣ್ಯ ನಿಯಮ ಉಲ್ಲಂಘನೆ ಸೇರಿದಂತೆ ತಮ್ಮ ವಿರುದ್ಧ 15 ಪ್ರಕರಣಗಳು ಇರುವುದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರೇ ಉಲ್ಲೇಖಿಸಿದ್ದಾರಂತೆ! ಹೀಗಾಗಿ ಅವರ ಖಾತೆ ಬದಲಿಸುವಂತೆ ಒತ್ತಡ ಹೆಚ್ಚಾಗಿದೆ. ಕೀಟಲೆ ಮಾಡುವ ಪುಂಡುಪೋಕರಿಯನ್ನು ಅದೇ ತರಗತಿಯ ಲೀಡರನ್ನಾಗಿ ಮಾಡುವ ಪರಿಪಾಟ ಕೆಲವು ಶಾಲಾ-ಕಾಲೇಜುಗಳಲ್ಲಿದೆ! ಹೀಗೆ ಮಾಡಿದರೆ ವಿಧಿಯಿಲ್ಲದೆ ಆತನ ಪೋಕರಿತನಕ್ಕೆ ಬ್ರೇಕ್ ಬೀಳಬಹುದು ಎನ್ನುವುದು ಶಾಲಾ ಮುಖ್ಯಸ್ಥರ ಅನಿಸಿಕೆ!

ಅಕಸ್ಮಾತ್ ಲೀಡರಾದ ಆ ಪುಂಡು ಪೋಕರಿಯ ಕೀಟಲೆ ಹೆಚ್ಚಾದರೆ ಮಾತ್ರ ಕಷ್ಟ! ಅರಣ್ಯ ನಿಯಮ ಉಲ್ಲಂಘನೆಯ ಆರೋಪ ಹೊತ್ತ ಅರಣ್ಯ ಸಚಿವರ ಖಾತೆ ಬದಲಾವಣೆಯ ವಿಚಾರದಲ್ಲಿ ನಡೆಯುತ್ತಿರುವ ಒತ್ತಡವೂ ಅರಣ್ಯರೋದನ ಆಗುತ್ತಿರಬಹುದೇ?

–ಪಿ.ಜೆ.ರಾಘವೇಂದ್ರ,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT