ADVERTISEMENT

ಅದೇ ರಾಜಕಾರಣಿಗಳು, ಅದೇ ಮೇಲಾಟ!

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST

ರಾಜ್ಯಸಭೆ ಹಾಗೂ ವಿಧಾನ ಪರಿಷತ್ತುಗಳು ಸರ್ಕಾರಗಳಿಗೆ ಮಾರ್ಗದರ್ಶನ ನೀಡುವ ಮೇಧಾವಿಗಳ ಮನೆ ಎಂಬ ಭಾವನೆ ಇದೆ. ಈ ಅನುಭವ ಮಂಟಪಗಳು ಅರಿತವರಿಂದ, ಅನುಭಾವಿಗಳಿಂದ ಕಳೆಗಟ್ಟಬೇಕು. ಅವು ಸಾಧ್ಯವಾದಷ್ಟೂ ರಾಜಕೀಯದಿಂದ ಮುಕ್ತವಾಗಿರಬೇಕು.

ಕೊರೊನಾದ ಇಂಥ ಸಂಕಷ್ಟ ಪರಿಸ್ಥಿತಿಯಲ್ಲಾದರೂ ರಾಜ್ಯಸಭೆಗೆ, ವಿಧಾನ ಪರಿಷತ್ತಿಗೆ ತಜ್ಞ ವೈದ್ಯರನ್ನು, ತಂತ್ರಜ್ಞರನ್ನು, ಶಿಕ್ಷಣ ತಜ್ಞರನ್ನು, ವಾಸ್ತುಶಿಲ್ಪಿಗಳನ್ನು, ಅರ್ಥಶಾಸ್ತ್ರಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಆರಿಸಿ ಕಳಿಸುವಂತಹ ವಿವೇಕವನ್ನು ರಾಜಕೀಯ ಪಕ್ಷಗಳು ತೋರಬಹುದು ಎಂದು ಭಾವಿಸಿದವರಿಗೆ ನಿರಾಸೆ ಆಗುವ ರೀತಿಯಲ್ಲಿ ಬೆಳವಣಿಗೆಗಳು ನಡೆದಿವೆ. ಅದೇ ರಾಜಕಾರಣಿಗಳು, ಅದೇ ವಂಶ ರಾಜಕಾರಣ, ಅದೇ ಗುಂಪುಗಾರಿಕೆ, ಜಾತಿ– ಉಪಜಾತಿಗಳ ಮೇಲಾಟ!

-ಬಿಂಡಿಗನವಿಲೆ ಭಗವಾನ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.