ADVERTISEMENT

ವಾಚಕರ ವಾಣಿ| ಧೈರ್ಯದಿಂದ ಎದುರಿಸಬೇಕಿತ್ತು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 19:31 IST
Last Updated 2 ಡಿಸೆಂಬರ್ 2022, 19:31 IST

‘ಎಲ್ಲಿಯವರೆಗೆ ಹೆದರುವವರು ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರು ಇದ್ದೇ ಇರುತ್ತಾರೆ!’ ಎಂದು ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಹೇಳುವ ಮಾತು ಪ್ರಸ್ತುತವೆನಿಸುತ್ತದೆ. ಕೋಲಾರ ಜಿಲ್ಲೆಯ ನಂಗಲಿ ಭಾಗದಲ್ಲಿ ನಡೆದಿರುವ ಪ್ರಕರಣದಿಂದ ಈ ಮಾತು ನೆನಪಾಯಿತು. ದಲಿತ ಯುವಕನು ಒಕ್ಕಲಿಗ ಯುವಕರ ಬೈಕ್ ಅನ್ನು ಹಿಂದಿಕ್ಕಿದ್ದಕ್ಕೆ ಆ ಜಾತಿಯ ನಾಲ್ವರು ಯುವಕರು ದಲಿತ ಯುವಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ, ಇದರಿಂದ ಮನನೊಂದಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದೆಂತಹ ವಿಪರ್ಯಾಸ. ಅದೇ ಯುವಕ ಆ ನಾಲ್ವರನ್ನು ಧೈರ್ಯದಿಂದ ಎದುರಿಸಿ, ಜಾತಿ ನಿಂದನೆ ಮಾಡಿದವರಿಗೆ ಕಾನೂನಾತ್ಮಕ ಶಿಕ್ಷೆ ಕೊಡಿಸಿದ್ದರೆ ಆತ ಇತರ ದಲಿತರಿಗೆ ಮಾದರಿಯಾಗುತ್ತಿದ್ದ. ಅದು ಬಿಟ್ಟು ಅವಮಾನವಾಯಿತು ಎಂದು ಪ್ರಾಣ ಬಿಟ್ಟರೆ ಏನು ಸಾಧಿಸಿದಂತಾಯಿತು?

ದಲಿತ ಯುವಕರು ಯಾವುದೇ ಅವಮಾನಗಳಿಗೆ ಜಗ್ಗದೆ ‘ಶಿಕ್ಷಣ, ಸಂಘಟನೆ, ಹೋರಾಟ’ ಎನ್ನುವ ಅಂಬೇಡ್ಕರ್ ಅವರ ಅಸ್ತ್ರವನ್ನು ಉಪಯೋಗಿಸಿ ಎದುರಾಳಿಗಳ ಎದೆ ನಡುಗುವಂತೆ ಬದುಕಬೇಕು. ದಲಿತ ಎನ್ನುವ ಕೀಳರಿಮೆಯನ್ನು ಮೊದಲು ಕಿತ್ತು ಬಿಸಾಕಿದರೆ ಆಗ ಭಯ ತಾನಾಗಿಯೇ ದೂರವಾಗುತ್ತದೆ.

- ರಾಜು ಬಿ. ಲಕ್ಕಂಪುರ,ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.