ADVERTISEMENT

ಸ್ಮಾರಕ ಬೇಡ, ಸಾರ್ಥಕ ಯೋಜನೆ ರೂಪಿಸಿ

ಕೆ.ಎಸ್‌.ನಾಗರಾಜ
Published 21 ಡಿಸೆಂಬರ್ 2018, 19:42 IST
Last Updated 21 ಡಿಸೆಂಬರ್ 2018, 19:42 IST

ಯಾವುದೇ ಕ್ಷೇತ್ರದವರಾದರೂ ಸರಿ, ಶ್ರೇಷ್ಠ ವ್ಯಕ್ತಿಗಳು ನಿಧನರಾದಾಗ ಅವರಿಗೆ ಸ್ಮಾರಕಗಳನ್ನು ನಿರ್ಮಿಸುವ ಬದಲು,ಸತ್ತ ವ್ಯಕ್ತಿಯ ಹೆಸರಿನಲ್ಲಿ ರಚನಾತ್ಮಕವಾದ ಯೋಜನೆಗಳನ್ನು ರೂಪಿಸುವುದು ಒಳ್ಳೆಯದು.

ರಂಗಭೂಮಿ, ಕಿರುತೆರೆ, ಚಲನಚಿತ್ರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ದುಡಿದ ಸಾವಿರಾರು ಸಣ್ಣಪುಟ್ಟ ಕಲಾವಿದರು ನಾಡಿನಲ್ಲಿದ್ದಾರೆ. ವಯಸ್ಸಾಗಿ, ಈಗ ದುಡಿಮೆಗೆ ಅವಕಾಶವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಲವರು ಇದ್ದಾರೆ.

ಇಂಥವರನ್ನು ಗಮನದಲ್ಲಿಟ್ಟು ಚಿತ್ರರಂಗದ ಹಿರಿಯರು, ಡಾ. ರಾಜ್‌ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಷ್‌ ಅವರ ಹೆಸರಿನಲ್ಲಿ ಆಸ್ಪತ್ರೆ, ವಸತಿ ಸಮುಚ್ಚಯ ಅಥವಾ ಇಂಥ ಕಲಾವಿದರ ಮಕ್ಕಳಿಗಾಗಿ ಶಾಲೆ ಆರಂಭಿಸಿದರೆ ನಿಜಕ್ಕೂ ಸೇವೆ ಸಾರ್ಥಕವಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.