ರಾಜಭವನದಲ್ಲಿ ಬೆಕ್ಕಿನ ಕಾಟ ಹೆಚ್ಚಾಗಿದ್ದು ಅವುಗಳನ್ನು ಹಿಡಿಯುವಂತೆ ಪಾಲಿಕೆಗೆ ಪತ್ರ ಬರೆದಿರುವುದು ವರದಿಯಾಗಿದೆ (ಪ್ರ.ವಾ., ಡಿ 21).
ಬೆಕ್ಕುಗಳನ್ನು ಹೇಗಾದರೂ ಹಿಡಿಯಬಹುದು. ಆದರೆ ವಿಧಾನಸೌಧ ಹಾಗೂ ಕೆಲವು ಇಲಾಖೆಗಳಲ್ಲಿ ಹೆಗ್ಗಣಗಳೂ ಕಳ್ಳಬೆಕ್ಕುಗಳೂ ಇದ್ದು ಅವುಗಳನ್ನು ಹಿಡಿಯಲು ಜನರು ದೇವರಿಗೇ ಪತ್ರ ಬರೆಯಬೇಕೇನೋ…!
ಹಲವರು ಹೇಳುವಂತೆ, ರಾಜಭವನ ಎಂಬುದೇ ‘ಬಿಳಿಯಾನೆ’ ಆಗಿದೆ. ಇದನ್ನು ಸಾಕಲು ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಈ ಆನೆಯನ್ನೂ ಹಿಡಿಯಬೇಡವೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.