ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬಾರದೆಂದು ಹಲವು ಮಠಾಧೀಶರು ಬಹಿರಂಗವಾಗಿ ಆಗ್ರಹಪಡಿಸಿದ್ದು ಸರಿಯಷ್ಟೇ. ಆದರೆ ಇದೀಗ ಯಡಿಯೂರಪ್ಪ ಅವರೇ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಹೊಸ ಮುಖ್ಯಮಂತ್ರಿ ಆಗಿದ್ದಾರೆ. ಮಠಾಧೀಶರ ಆಗ್ರಹಕ್ಕೆ ಗೌರವವೇ ಸಿಗಲಿಲ್ಲದಂತಾಗಿದೆ. ಹೀಗಾಗಿ, ಇದೀಗ ಮಠಾಧೀಶರೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ರಾಜಕೀಯವೆಂಬುದು ಎಷ್ಟೊಂದು ಗಡಚಾಗುತ್ತಿದೆ? ಎಷ್ಟೊಂದು ನಿಗೂಢವಾಗುತ್ತಿದೆ? ಅಲ್ಲವೇ?
-ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.