ADVERTISEMENT

ವಾಚಕರ ವಾಣಿ: ಸಚಿವರಿಗೆ ಅಧಿಕಾರ ವೈರಾಗ್ಯವೇಕೆ?

​ಪ್ರಜಾವಾಣಿ ವಾರ್ತೆ
Published 2 ಮೇ 2022, 19:30 IST
Last Updated 2 ಮೇ 2022, 19:30 IST

ಪಕ್ಷಾಂತರ ಮಾಡಿ ತಪ್ಪೆಸಗಿದೆ ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಮೇ 1). ಸಚಿವರಿಗೆ ಇಂಥ ಅಧಿಕಾರ ವೈರಾಗ್ಯ ಯಾಕೆ ಎಂಬುದು ತಿಳಿಯದಾಗಿದೆ. ‘ರಾಜಕೀಯದಲ್ಲಿ ನಾನು ಹಣ ಮಾಡಬೇಕೆಂದೇನೂ ಇಲ್ಲ’ ಎಂದೂ ಹೇಳಿದ್ದಾರೆ. ರಾಜಕೀಯದ ಮೂಲಕ ಹಣ ಮಾಡುವುದೂ ಒಂದು ಮಾರ್ಗ ಎಂದು ಈ ಮೂಲಕ ಅವರು ಸೂಚ್ಯವಾಗಿ ಹೇಳಿದ್ದಾರೆ. ಎಂ.ಟಿ.ಬಿ. ಸಹಿತ 18 ಮಂದಿ ಶಾಸಕರು ರಾಜೀನಾಮೆ ನೀಡಿ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿ, ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅವರ ಈ ತ್ಯಾಗಕ್ಕೆ ಪ್ರತಿಫಲವಾಗಿ ಸಚಿವ ಸ್ಥಾನ ನೀಡಲಾಗಿದೆ.

ಬಹುತೇಕ ಆಯ್ಕೆಯಾದ ಶಾಸಕರಿಗೆ ಸಚಿವರಾಗಬೇಕು ಎಂಬ ಬಲವಾದ ಆಕಾಂಕ್ಷೆ ಇದ್ದೇ ಇರುತ್ತದೆ. ರಾಜಕಾರಣವು ಸೇವೆಯ ಒಂದು ಭಾಗ ಎಂದು ಯಾವ ರಾಜಕಾರಣಿಯೂ ತಿಳಿದಿಲ್ಲ. ಇಂಥ ಮನೋಭಾವ ಹೊಂದಿದ್ದರೆ ಇವತ್ತು ಗುತ್ತಿಗೆ ಕಾಮಗಾರಿಯಲ್ಲಿ ಶೇ 40 ಕಮಿಷನ್ ಸುದ್ದಿ ಮಾಡುತ್ತಿರಲಿಲ್ಲ. ಎಂ.ಟಿ.ಬಿ. ಅವರಿಗೆ ಖಾತೆಯ ಮೇಲೆ ಮುನಿಸೋ, ಸರ್ಕಾರದ ನಡೆಯ ಬಗ್ಗೆ ಅತೃಪ್ತಿಯೋ? ಅಂತೂ ಸಚಿವರಿಗೆ ಅಧಿಕಾರ ವೈರಾಗ್ಯವೇಕೆ ಎಂಬುದು ಪ್ರಶ್ನಾರ್ಹವಾಗಿದೆ.

- ಗಣಪತಿ ಶಿರಳಗಿ,ಸಾಗರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.