ಉಕ್ರೇನ್ನ ಮೇಲೆ ರಷ್ಯಾದ ದಾಳಿ ಹಾಗೂ ಸಾವುನೋವಿನ ನಡುವೆಯೂ ಜಾಲತಾಣದಲ್ಲಿ ನೋಡಿದ ಒಂದು ಸುದ್ದಿಯ ತುಣುಕು ಗಮನ ಸೆಳೆಯಿತು. ಸೆರೆ ಸಿಕ್ಕ ರಷ್ಯಾದ ಸೈನಿಕನೊಬ್ಬನಿಗೆ ಉಕ್ರೇನ್ನ ಸೈನಿಕರು ಬಿಸಿ ಬಿಸಿ ಚಹಾವನ್ನು ಸೇವಿಸಲು ಕೊಟ್ಟು, ಆತನ ತಾಯಿಯೊಡನೆ ಫೋನ್ ಮೂಲಕ ಮಾತನಾಡಲು ಅನುವು ಮಾಡಿಕೊಟ್ಟರು. ಯುದ್ಧದ ನಡುವೆಯೂ ವೈರಿಗಳ ನಡುವೆ ಮಾನವೀಯತೆಯು ಇನ್ನೂ ಮರೆಯಾಗದಿರುವುದು ಚೇತೋಹಾರಿಯಾಗಿದೆ.
ಭರತ್ ಬಿ.ಎನ್., ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.