ADVERTISEMENT

ನಿಷ್ಠುರ ನಿಕಷ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 19:37 IST
Last Updated 20 ಜನವರಿ 2020, 19:37 IST

‘ಚಿಮೂ’ ಅವರ ಒಂದು ಪುಸ್ತಕ, ‘ಹೊಸತು ಹೊಸತು’: ಅರ್ಥವತ್ತು.
ಅವರ ಜಾಗ ತುಂಬಲಾಗದ್ದು!
(ಇದಲ್ಲ ಮಾಮೂಲು ಮರಣೋತ್ತರ ಕೈವಾರ).
ಅವರ ವಸ್ತುನಿಷ್ಠ ನಿಷ್ಠುರ
ನಿಕಷದಲ್ಲಿ ಉತ್ತೀರ್ಣರು ವಿರಳ!
(ಅಂಥವರಲ್ಲಿ ಶಿಷ್ಯ ನಾನೊಬ್ಬ) ಇರಲಿ!
ಅಂತಿರಲಿ, ಈಚೀಚೆಗೇತಕ್ಕೆ
ದೊಡ್ಡವರ ಸಾಲು ಸಾವು ‘ಹಬ್ಬ?’ (ಅಂತಕನ ಅಜೇಯತೆಗೆ ‘ಅಬ್ಬ!’
ಎನ್ನದೆ ವಿಧಿಯಿಲ್ಲ)

–ಸಿ.ಪಿ.ಕೆ.,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT