ADVERTISEMENT

ವಾಚಕರ ವಾಣಿ | ದಂಡ ವಸೂಲಿ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 2 ಮೇ 2020, 1:24 IST
Last Updated 2 ಮೇ 2020, 1:24 IST
   

ಲಾಕ್‌ಡೌನ್‌ನಿಂದ ಜನರ ಜೀವನ ಸಂಕಷ್ಟದಲ್ಲಿದ್ದು, ಎಷ್ಟೋ ಮಂದಿ ಕೆಲಸವಿಲ್ಲದೆ ಹಣದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ರಾಜ್ಯ ಸರ್ಕಾರವು ಲಾಕ್‌ಡೌನ್‌ ಅವಧಿಯಲ್ಲಿ ಜಪ್ತಿ ಮಾಡಿದ ಸಾವ೯ಜನಿಕರ ವಾಹನಗಳನ್ನು ವಾಪಸ್‌ ನೀಡಲು ದಂಡ ವಿಧಿಸುತ್ತಿರುವುದು ಜನರ ಗಾಯದ ಮೇಲೆ ಬರೆ ಎಳೆಯುವಂತಹ ಕೆಲಸವಾಗಿದೆ. ಈ ನಿಧಾ೯ರ ಇಂತಹ ಸಂದಭ೯ದಲ್ಲಿ ಸರಿಯೇ?

ಕೆಲವರು ವಾಹನಗಳ ಮಾಲೀಕರಾಗಿದ್ದರೂ ಸದ್ಯದ ಸ್ಥಿತಿಯಲ್ಲಿ ಹಣವಿಲ್ಲದೇ ಕುಟುಂಬ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ಸಹಾಯ ಮಾಡುವ ಬದಲು, ಜನರಿಂದಲೇ ಹಣ ವಸೂಲಿಗೆ ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ಸರ್ಕಾರವು ಜನರಿಂದ ದಂಡ ವಸೂಲಿ ಮಾಡದೆ ಅವರ ವಾಹನಗಳನ್ನು ಹಿಂದಿರುಗಿಸಬೇಕು.

–ಇಫಾ೯ನ್, ರೋಣ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.