ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪದಾಧಿಕಾರಿಗಳಿಗೆ ನೀಡಿರುವ ‘ಹೊಣೆ ನಿರ್ವಹಿಸಿ, ಇಲ್ಲಾ ದಾರಿ ಬಿಡಿ’ ಎಂಬ ಕರೆ (ಪ್ರ.ವಾ., ಡಿ. 5), ಪಕ್ಷದಲ್ಲಿ ಇನ್ನೂ ಕಸುವು ಉಳಿದಿರಬಹುದು ಎಂಬುದಕ್ಕೆ ಸೂಚನೆ ನೀಡುವಂತಿದೆ! ದೇಶದ ಪ್ರಸಕ್ತ ರಾಜಕೀಯವು ಗತಿ ಮತ್ತು ಆಕೃತಿಗಳನ್ನು ಕಳೆದುಕೊಂಡಂತಿದೆ. ವ್ಯಕ್ತಿಗತ ಅಧಿಕಾರ
ಲಾಲಸೆಗೆ ಮಾತಿನ ಮೋಡಿಯ ಮುಸುಕುಹಾಕಿ ಅದನ್ನು ಮುನ್ನೂಕುವ ಚಾಲಾಕೇ ದೇಶವನ್ನಾಳುವ ಸಾಮರ್ಥ್ಯ ಎಂದು
ಆಲಸಿ ಮಹಾಜನತೆಯನ್ನು ನಂಬಿಸಲಾಗಿದೆ. ಹಾಗಾಗಿ ಮಹಾಜನತೆ ವೈಚಾರಿಕತೆಯನ್ನು ಬದಿಗೊತ್ತಿ ನಿದ್ದೆಗೆ ಜಾರಿದೆ.
ಜನಜಾಗೃತಿ ಎಂಬುದು ಇಂದಿನ ತುರ್ತು ಅಗತ್ಯ. ಖರ್ಗೆಯವರ ಈ ಮಾತು ಅಷ್ಟನ್ನಾದರೂಮಾಡುವಲ್ಲಿ ಯಶಸ್ವಿಯಾದರೆ, ಪ್ರತಿಪಕ್ಷವೆನಿಸಿರುವ ಕಾಂಗ್ರಸ್ ತನ್ನ ಆ ಸ್ಥಾನಕ್ಕೆ ಸಾರ್ಥಕತೆ ಕಲ್ಪಿಸಿದಂತೆ ಆಗುತ್ತದೆ!
ಆರ್.ಕೆ.ದಿವಾಕರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.