ನಂಜನಗೂಡಿನ ರಥ ಬೀದಿಯ ನಿವಾಸಿಯೊಬ್ಬರು ಇತ್ತೀಚೆಗೆ ನಿಧನರಾದ್ದರಿಂದ, ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಕಳೆದ ಗುರುವಾರ ಹಾಗೂ ಶುಕ್ರವಾರ ಯಾವುದೇ ರೀತಿಯ ಪೂಜೆ- ಪುನಸ್ಕಾರ ನಡೆಯಲಿಲ್ಲ. ಇದೇ ರೀತಿಯ ಸಂಪ್ರದಾಯವು ಪುರಾಣ ಪ್ರಸಿದ್ಧ ಚಾಮುಂಡಿ ಬೆಟ್ಟ ಹಾಗೂ ರಾಜ್ಯದ ಇನ್ನೂ ಹಲವು ದೇವಸ್ಥಾನಗಳಲ್ಲಿ ಚಾಲ್ತಿಯಲ್ಲಿದೆ.
ಸಕಲ ಚರಾಚರಗಳಿಗೂ ಮೂಲ ಸ್ವರೂಪನೂ, ಸಕಲ ಗ್ರಹಬಲ ಸರಸಿಜಾಕ್ಷನೂ,ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೂ ಆದ ಆ ಪರಮಾತ್ಮನಿಗೆ ಮಡಿಯೇ? ಮೈಲಿಗೆಯೇ? ನಿಜಕ್ಕೂ ಅಚ್ಚರಿಯಾಗುತ್ತದೆ.
ಕೆ.ವಿ.ವಾಸು,ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.