ADVERTISEMENT

ಮಕ್ಕಳಿಂದ ಪೋಷಕರ ಕೊಲೆ: ಗಂಭೀರವಾಗಿ ಚಿಂತಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:00 IST
Last Updated 10 ಸೆಪ್ಟೆಂಬರ್ 2019, 20:00 IST

ಸಣ್ಣಪುಟ್ಟ ವಿಷಯಗಳಿಗಾಗಿ ಕೆಲವು ಮಕ್ಕಳು ಪೋಷಕರನ್ನೇ ಕೊಲ್ಲಲು ಮುಂದಾಗುತ್ತಿರುವುದು ತೀವ್ರ ಆತಂಕಕಾರಿ. ಬೆಂಗಳೂರಿನಲ್ಲಿ ಹುಡುಗಿಯೊಬ್ಬಳು ಇತ್ತೀಚೆಗೆ, ತನ್ನ ಗೆಳೆಯನ ಜೊತೆ ಒಡನಾಡಲು ಅಡ್ಡಗಾಲಾಗಿದ್ದ ತಂದೆಯನ್ನು ಗೆಳೆಯನ ಜೊತೆ ಸೇರಿ ಕೊಲೆ ಮಾಡಿದ್ದಳು ಎಂದು ವರದಿಯಾಗಿತ್ತು. ಇಂತಹುದೇ ಘಟನೆ ಬೆಳಗಾವಿಯಲ್ಲಿ ಮರುಕಳಿಸಿದೆ. ಗೇಮ್ ಆಡುತ್ತಿದ್ದುದನ್ನು ಪ್ರಶ್ನಿಸಿ ಮೊಬೈಲ್ ಫೋನ್‌ ಕಿತ್ತುಕೊಂಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನಂತೆ (ಪ್ರ.ವಾ., ಸೆ. 10). ಯಾವ ಪೋಷಕರೂ ತಮ್ಮ ಮಕ್ಕಳು ಹಾಳಾಗಲಿ ಎಂದು ಬಯಸುವುದಿಲ್ಲ. ಬುದ್ಧಿವಾದ ಹೇಳಿದ್ದಕ್ಕೇ ಮಕ್ಕಳು ಇಂತಹ ಅತಿರೇಕಕ್ಕೆ ಹೋಗುವುದು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ವಿಚಾರ.

-ನರಸಿಂಹಮೂರ್ತಿ ಟಿ.ಆರ್‌., ತೊಂಡೋಟಿ, ಮಧುಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT