ADVERTISEMENT

ಹೆಸರು ಉಳಿಯಲಿ, ಉಪಯೋಗವೂ ಆಗಲಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:49 IST
Last Updated 27 ನವೆಂಬರ್ 2020, 19:49 IST

ದಿವಂಗತ ಚಿತ್ರನಟ ಅಂಬರೀಷ್ ಅಭಿಮಾನಿಗಳು ಅವರಿಗೆ ಮದ್ದೂರು ತಾಲ್ಲೂಕಿನ ಹೊಟ್ಟೆಗೌಡನದೊಡ್ಡಿಯಲ್ಲಿ ಗುಡಿಯೊಂದನ್ನು ನಿರ್ಮಿಸಿ, ಅಲ್ಲಿ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ (ಪ್ರ.ವಾ., ನ. 25). ಅಭಿಮಾನವೂ ಇರಲಿ, ಪ್ರತಿಮೆ ಪ್ರತಿಷ್ಠಾಪನೆಯೂ ತಪ್ಪಲ್ಲ.

ಆದರೆ ತಮ್ಮ ನಾಯಕನ ಹೆಸರು ಜನಮಾನಸದಲ್ಲಿ ಸದಾ ಉಳಿಯಬೇಕು ಹಾಗೂ ಅದರಿಂದ ಜನರಿಗೆ ಉಪಯೋಗವೂ ಆಗಬೇಕು ಎಂದಾದರೆ, ಶಾಲೆ ಅಥವಾ ಆಸ್ಪತ್ರೆಯಲ್ಲಿ ಅವರ ಹೆಸರಿನಲ್ಲಿ ಒಂದು ಕೊಠಡಿಯನ್ನು ನಿರ್ಮಿಸುವುದು ಮಾದರಿ ಕಾರ್ಯವಾಗುತ್ತದೆ.
-ಧರ್ಮರಾಜ ಎಂ. ಕಲ್ಯಾಣಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT