ADVERTISEMENT

ಪ್ರಾಣಿಗಳ ಭಾಷೆಗಷ್ಟೇ ಸ್ಪಂದನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:30 IST
Last Updated 21 ನವೆಂಬರ್ 2022, 19:30 IST

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಆಧಾರ್‌ ಕಾರ್ಡ್‌ನಲ್ಲಿ ತಮ್ಮ ಹೆಸರು ‘ಕಾಂತಿಕುಮಾರ ದತ್ತಾ’ ಬದಲಿಗೆ ‘ಕಾಂತಿಕುಮಾರ ಕುತ್ತಾ’ ಎಂದು ನಮೂದಾದ ಕಾರಣ, ಬದಲಾಯಿಸಲು ಹೆಣಗಾಡಿದ್ದಾರೆ.

ಕೊನೆಗೆ ಅಧಿಕಾರಿಗಳ ಮುಂದೆ ನಾಯಿಯ ಹಾಗೇ ಬೊಗಳುತ್ತ ಗಮನ ಸೆಳೆದದ್ದು ಸಾಮಾಜಿಕ ಜಾಲತಾಣ ಹಾಗೂ ಮುದ್ರಣ ಮಾಧ್ಯಮದಲ್ಲಿ ವರದಿಯಾಗಿದೆ. ನಂತರ, ಆ ವ್ಯಕ್ತಿ ಹೆಸರು ಬದಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ಸಹ ತಿಳಿದುಬಂದಿದೆ. ಅಲ್ಲಿಗೆ, ಅಧಿಕಾರಿಗಳು ಮನುಷ್ಯರ ಭಾಷೆಗಿಂತ ಪ್ರಾಣಿಗಳ ಭಾಷೆಗೆ ಸ್ಪಂದಿಸುತ್ತಾರೆ ಎಂದು ತಿಳಿಯಬೇಕೆ?

ವೆಂಕಟೇಶ್ ಮುದಗಲ್,ಕಲಬುರಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.