ADVERTISEMENT

ಮಾಧ್ಯಮ: ಲಘು ವಿಚಾರವಲ್ಲ

ಹುರುಕಡ್ಲಿ ಶಿವಕುಮಾರ
Published 9 ಜನವರಿ 2019, 20:01 IST
Last Updated 9 ಜನವರಿ 2019, 20:01 IST

‘ಇಂಗ್ಲಿಷ್: ‍ಪ್ರಯೋಗವಾಗಿ ಬರಲಿ ಬಿಡಿ’ (ಪ್ರ.ವಾ., ಜ. 4) ಎಂದಿದ್ದಾರೆ ಎಸ್. ನಟರಾಜ ಬೂದಾಳು. ಯಾವುದೇ ಮಗುವಿಗೆ ಪ್ರಾಥಮಿಕ ಶಿಕ್ಷಣವನ್ನು ಆ ಮಗುವಿನ ತಾಯ್ನುಡಿಯಲ್ಲೇ ನೀಡಬೇಕೆಂಬ ತತ್ತ್ವವು ಪ್ರಯೋಗ, ಪರೀಕ್ಷೆ, ಫಲಿತಾಂಶದಿಂದ ಎಂದೋ ಸಾಬೀತಾಗಿದೆ.

ಈ ತತ್ತ್ವವನ್ನು ಪ್ರಪಂಚದ ಎಲ್ಲಾ ದೇಶಗಳ ಶಿಕ್ಷಣ ತಜ್ಞರು ಹಾಗೂ ಮಕ್ಕಳ ಮನೋವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಹೀಗಿದ್ದೂ ಶಿಕ್ಷಣದಂಥ ಮಹತ್ವದ ವಿಷಯವನ್ನು ಇಷ್ಟೊಂದು ಲಘುವಾಗಿ ಪರಿಗಣಿಸುವುದು ಸಲ್ಲದು.

ಇಂಗ್ಲಿಷ್ ಹೇರಿಕೆಯಿಂದ ಮಗುವಿನ ಮೇಲಾಗುವ ಬೌದ್ಧಿಕ ಒತ್ತಡ ಏನೆಂದು ನಾವು ಅರಿಯಬೇಕಾಗಿದೆ. ಮಗುವಿನ ಸುಂದರ ಬಾಲ್ಯ ನಲುಗಿ ಹೋಗಬಾರದು. ಎಲ್ಲಕ್ಕೂ ಮಿಗಿಲಾಗಿ ಶಿಕ್ಷಣದ ಸಾರ್ಥಕತೆಯನ್ನು ನಾವು ಗಮನಿಸಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.