ADVERTISEMENT

ಹಳಿ ಏರುವುದೇ ರೈಲ್ವೆ ಯೋಜನೆ?

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 18:37 IST
Last Updated 17 ಜನವರಿ 2021, 18:37 IST

87 ಕಿ.ಮೀ. ಉದ್ದದ ₹ 1,854 ಕೋಟಿ ವೆಚ್ಚದ ಮೈಸೂರು– ಕುಶಾಲನಗರ ಹೊಸ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಪರಿಸರವಾದಿಗಳ ವಿರೋಧದ ಮಧ್ಯೆಯೂ ಇತ್ತೀಚೆಗೆ ಅನುಮತಿ ನೀಡಿದೆ.

ಪರಿಸರವಾದಿಗಳ ವಿರೋಧದಿಂದ, ಈವರೆಗೆ ಸುಮಾರು ₹ 300 ಕೋಟಿ ವೆಚ್ಚವಾಗಿರುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯು ನ್ಯಾಯಾಲಯದ ತಡೆಯ ಮೂಲಕ ಹಳಿ ತಪ್ಪಿರುವಾಗ, ಇಂತಹುದೇ ಯೋಜನೆಗೆ ಸರ್ಕಾರ ಅನುಮತಿ ನೀಡಿರುವುದು ತೀರಾ ಆಶ್ಚರ್ಯ. ಪ್ರಸ್ತಾವಿತ ಮೈಸೂರು– ಕುಶಾಲನಗರ ರೈಲು ಯೋಜನೆಯು ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯಂತೆ ಅರಣ್ಯ ಪ್ರದೇಶದಲ್ಲಿ ಹಾದು ಹೋಗುವುದರಿಂದ ಈ ಯೋಜನೆಯೂ ಹಳಿ ಏರುವುದು ಸಂದೇಹ.

ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.