ADVERTISEMENT

ಇನ್ನಾದರೂ ಬುದ್ಧಿ ಬರಲಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 15:28 IST
Last Updated 23 ಸೆಪ್ಟೆಂಬರ್ 2022, 15:28 IST

ವಾಮಮಾರ್ಗದಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಸಮಾಜದ ಕಣ್ಣಿಗೆ ಮಣ್ಣೆರಚುವ ಕೆಲಸ ಹಿಂದಿನಿಂದ ನಡೆದು ಬಂದಿರುವುದಕ್ಕೆ ನಿದರ್ಶನ 2014- 2015ನೇ ಸಾಲಿನಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ. ಇಂತಹವರಿಂದ ಅನೇಕ ಪ್ರತಿಭಾವಂತರು ಮೂಲೆಗುಂಪಾಗುವಂತಾಗಿದೆ. ಇನ್ನಾದರೂ ಪೋಷಕರಿಗೆ, ಉದ್ಯೋಗ ಆಕಾಂಕ್ಷಿಗಳಿಗೆ ಬುದ್ಧಿ ಬರಬೇಕು. ಅಡ್ಡದಾರಿ ‌‌‌‌‌‌‌‌‌‌‌‌‌‌‌‌‌‌‌‌‌‌‌ತುಳಿದು ಉದ್ಯೋಗ ಗಿಟ್ಟಿಸಿಕೊಂಡರೆ ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಬಹುದೆಂಬ ಭಯ ಬಂದು, ಲಂಚ ಕೊಡುವ ಗೋಜಿಗೆ ಹೋಗಬಾರದು. ಅರ್ಹತೆಯುಳ್ಳವರು ಉದ್ಯೋಗಕ್ಕೆ ಸೇರಿದರೆ ಸಮಾಜಕ್ಕೆ ಒಳಿತಲ್ಲವೇ?

-ಸಾ.ಮ.ಶಿವಮಲ್ಲಯ್ಯ,ಸಾಸಲಾಪುರ, ಕನಕಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT