ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಾಸ್ತವಾಂಶಗಳನ್ನು ಸ್ವೀಕರಿಸುವವರ ಮನಃಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತಿದೆ. ಜನರಿಗೆ ವಾಸ್ತವಕ್ಕಿಂತ ಭ್ರಮೆಯ ಬದುಕೇ ಹೆಚ್ಚು ಆಕರ್ಷಣೀಯವಾಗಿದೆ. ವಿವಿಧ ಸಂಸ್ಥೆಗಳ ಸಮೀಕ್ಷೆಗಳು, ವರದಿಗಳನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವ ಪರಿಪಾಟ ಹೆಚ್ಚುತ್ತಿದೆ. ಯಾವುದೇ ವಿಷಯವಾಗಿರಲಿ, ಅದಕ್ಕೆ ಧರ್ಮ, ಜಾತಿ, ರಾಜಕೀಯದ ಬಣ್ಣ ಅಂಟಿಸಿ ವಿಷಯಾಂತರಗೊಳಿಸಿ ಲಾಭಕ್ಕೆ ಬಳಸುವವರ ಸಂಖ್ಯೆಯೇ ಹೆಚ್ಚು.
ಯಾವುದೇ ವಿಷಯ, ಹೇಳಿಕೆ ಅಥವಾ ವರದಿಗಳನ್ನು ಕೂಲಂಕಷವಾಗಿ ಪರಿಶೀಲನೆಗೆ, ವಿಮರ್ಶೆಗೆ ಒಳಪಡಿಸುವ ವ್ಯವಧಾನ ಜನರಲ್ಲಿ ಕಡಿಮೆಯಾಗುತ್ತಿದೆ. ವಿವೇಕಾನಂದರ ವಿವೇಕವಾಣಿ, ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’, ಕುವೆಂಪು ಅವರ ‘ವಿಶ್ವಮಾನವ ಸಂದೇಶ’ ಎಲ್ಲರ ಮನೆ– ಮನ ತಲುಪಬೇಕಾಗಿದೆ.
- ಗಣೇಶ ಆರ್., ಮಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.