ADVERTISEMENT

ಮತ್ತೊಮ್ಮೆ ‘ವಿಶ್ವ’ವಿಜೇತವಾಗಲಿ

​ಪ್ರಜಾವಾಣಿ ವಾರ್ತೆ
Published 31 ಮೇ 2019, 18:24 IST
Last Updated 31 ಮೇ 2019, 18:24 IST

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿಭಾರತ ಮುಂಚೂಣಿಯಲ್ಲಿದೆ. ವಿದೇಶಗಳಲ್ಲಿ ಇತ್ತೀಚೆಗೆ ಮೂಡಿಬರುತ್ತಿರುವ ತಂಡದ ಉತ್ತಮ ಪ್ರದರ್ಶನದಿಂದಾಗಿ ಭಾರತೀಯರಲ್ಲಿ ಪ್ರಶಸ್ತಿಯ ಆಸೆ ಮತ್ತೊಮ್ಮೆ ಚಿಗುರೊಡೆದಿದೆ.

ಐಪಿಎಲ್‍ನಲ್ಲಿ ಆಡಿದ ಆಟಗಾರರ ಸ್ಥಿರ ಪ್ರದರ್ಶನವು ತಂಡಕ್ಕೆ ಶಕ್ತಿ ತುಂಬಿದೆ. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳನ್ನು ಹೊಂದಿರುವ ಭಾರತ ತಂಡದ ಗೆಲುವಿನಲ್ಲಿ ಹಿರಿಯ ಆಟಗಾರ ಎಂ.ಎಸ್. ಧೋನಿ ಅವರ ಅನುಭವ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ.

ಹೀಗಾಗಿ, ಭಾರತ ತಂಡ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಮೂಲಕ ದೇಶದ ಕೀರ್ತಿಪತಾಕೆಯನ್ನು ಎತ್ತಿಹಿಡಿಯಲಿ. ನಾಯಕ ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಲಿ.

ADVERTISEMENT

-ಸುದರ್ಶನ ಎಚ್. ಯಡಹಳ್ಳಿ, ಬೆನಕಟ್ಟಿ, ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.