ಇಂದಿರಾ ಕ್ಯಾಂಟೀನ್ನ ಉಪಾಹಾರ ಮತ್ತು ಊಟದ ದರ ಏರಿಸಬೇಕೆಂದು ಪಾಲಿಕೆ ಆಯುಕ್ತರು ಮೇಯರ್ಗೆ ಮೌಖಿಕ ಪ್ರಸ್ತಾವ ಸಲ್ಲಿಸಿರುವುದು ಸರಿಯಲ್ಲ. ಉಪಾಹಾರದ ದರವನ್ನು ₹ 5ರಿಂದ ₹ 10ಕ್ಕೆ ಹಾಗೂ ಊಟದ ದರವನ್ನು ₹ 10ರಿಂದ 15ಕ್ಕೆ ಏರಿಸಲು ಪಾಲಿಕೆ ನಡೆಸುತ್ತಿರುವ ಚಿಂತನೆಯೇನಾದರೂ ಜಾರಿಗೆ ಬಂದರೆ, ಬಡವರು ಮತ್ತು ಜನಸಾಮಾನ್ಯರ ಮೇಲೆ ಪ್ರಹಾರ ನಡೆಸಿದಂತೆ ಆಗುತ್ತದೆ.
ಇಂದಿರಾ ಕ್ಯಾಂಟೀನ್ಗೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಕಡಿಮೆ ಆದಾಯವುಳ್ಳ ಹಲವರು ಹೋಗುತ್ತಿದ್ದಾರೆ. ಅಲ್ಲಿ ಊಟ, ಉಪಾಹಾರದ ದರ ಏರಿಕೆಯಾದರೆ ಅವರೆಲ್ಲ ಇತರೆಡೆಗೆ ಧಾವಿಸಬೇಕಾಗುತ್ತದೆ. ಆಗ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚುವ ಪ್ರಸಂಗ ಬರಬಹುದು. ಇಂತಹ ಜನವಿರೋಧಿ ಪ್ರಸ್ತಾವವನ್ನು ಒಪ್ಪದೆ, ಹೆಚ್ಚಿನ ದರ ನಿಗದಿಪಡಿಸುವ ಚಿಂತನೆಯಿಂದ ಬಿಬಿಎಂಪಿ ಹಿಂದೆ ಸರಿಯಬೇಕು.
-ಐ.ಎಚ್.ಇಟಗಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.