ADVERTISEMENT

ಕಾವಲು ಪಡೆ ನೇಮಿಸಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 21:09 IST
Last Updated 6 ಏಪ್ರಿಲ್ 2020, 21:09 IST

ಕೊರೊನಾ ವೈರಸ್‌ಗೆ ಸಂಬಂಧಿಸಿದ ಲಾಕ್‌ಡೌನ್‌ನಿಂದಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಮದ್ಯ ಸರಬರಾಜು ಸ್ಥಗಿತಗೊಂಡಿದೆ. ಇದರ ಫಲವಾಗಿ ಮದ್ಯ ಗ್ರಾಹಕರಿಗೆ ಬಾಯಿ ಕಟ್ಟಿದಂತೆ ಆಗಿರುವುದು ಸಹಜವೇ. ಕಳ್ಳಬಟ್ಟಿ ಸಾರಾಯಿ ತಯಾರಕರು ಇದರ ಲಾಭ ಪಡೆದು, ಅಲ್ಲಲ್ಲಿ ನಿಗೂಢ ಪ್ರದೇಶದಲ್ಲಿ ತಮ್ಮ ದಂಧೆ ಆರಂಭಿಸಿ ಸರ್ಕಾರಕ್ಕೆ, ಸಮಾಜಕ್ಕೆ ಮತ್ತೆ ತಲೆನೋವಾಗಿ ಪರಿಣಮಿಸಬಹುದು.
ಈ ಪಿಡುಗು ಉಲ್ಬಣಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತು, ಪರಿಣಾಮಕಾರಿ ಕಾವಲು ಪಡೆ ನೇಮಿಸಿ ಕ್ರಮ ಕೈಗೊಳ್ಳಬೇಕು.

- ಬಿ.ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT