ಭೂಮಿ, ಜೀವಜಂತುಗಳು ಹುಟ್ಟಿಬಂದ ರೀತಿ ಹಾಗೂ ಮನುಷ್ಯ ತಾನೇ ತೀವ್ರಗತಿಯಲ್ಲಿ ನಡೆದುಬಂದ ಪ್ರಗತಿಪಥದಿಂದಾಗಿ ತಂದುಕೊಂಡ ಅಧೋಗತಿಯನ್ನು ಸತೀಶ್ ತೀರ್ಥಹಳ್ಳಿ ಕಾವ್ಯಾತ್ಮಕವಾಗಿ ಬಣ್ಣಿಸಿದ್ದಾರೆ (ಸಂಗತ, ಅ. 19). ಅಂತರಂಗದ ಒಳನೋಟವನ್ನೇ ಮರೆತು ಬರೀ ಬಹಿರಂಗದ ಬದುಕಿಗೆ ತೆರೆದುಕೊಂಡವರು, ಖ್ಯಾತನಾಮರಾಗಲು ಹವಣಿಸುತ್ತಾ, ಮನ್ನಣೆಗಾಗಿ ಕೊಳಕು ವ್ಯವಸ್ಥೆಯಲ್ಲಿ ಪಾಲ್ಗೊಂಡವರು ಇಂದಿನ ಸ್ಥಿತಿಗೆ ಏನು ಹೇಳುತ್ತಾರೆ?
ಮನುಷ್ಯರು ಭೂಮಿಗೆ ಅತಿಥಿಗಳಾಗಿ ಬಂದವರೇ ವಿನಾ ಒಡೆಯರಲ್ಲ. ಈಗಲಾದರೂ ನಮ್ಮ ಅಹಂ ಬದಿಗಿಟ್ಟು, ತಪ್ಪೊಪ್ಪಿಕೊಂಡು, ಪ್ರಕೃತಿಗೆ ನಮೋ ಎನಬಾರದೇ?
- ಸಿದ್ರಾಮಪ್ಪ ದಿನ್ನಿ, ಬೆಂಗಳೂರು
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.