ADVERTISEMENT

ವಾಚಕರ ವಾಣಿ: ಬೇಕಿತ್ತು ದಂಡ ರದ್ದತಿಯ ‘ಉಡುಗೊರೆ’!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಅಕ್ಟೋಬರ್ 2022, 21:31 IST
Last Updated 23 ಅಕ್ಟೋಬರ್ 2022, 21:31 IST

ದೀಪಾವಳಿ ಹಬ್ಬದ ಕಾರಣ, ಅ. 27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸದಂತೆ ಗುಜರಾತ್ ಸರ್ಕಾರ ‍ಪೊಲೀಸರಿಗೆ ನಿರ್ದೇಶನ ನೀಡಿದೆ (ಪ್ರ.ವಾ., ಅ. 23). ನಮ್ಮಲ್ಲಿ ದೀಪಾವಳಿಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿಗಾಗಿ ಬಗೆಬಗೆಯ ಆಶ್ವಾಸನೆ ಹಾಗೂ ಉಡುಗೊರೆಗಳನ್ನು ಕೊಟ್ಟರೆ, ಗುಜರಾತ್ ಸರ್ಕಾರ ಹೊಸ ಬಗೆಯ ‘ಉಡುಗೊರೆ’ ದಯಪಾಲಿಸಿದೆ. ಇದರಿಂದ ಎಷ್ಟೆಲ್ಲ ಅಪಘಾತಗಳು ಉಂಟಾಗುತ್ತವೋ ನಂತರ ಫಲಿತಾಂಶ ತಿಳಿಯುತ್ತದೆ. ಸಂಚಾರ ಉಲ್ಲಂಘನೆಯನ್ನೇ ರೂಢಿ ಮಾಡಿಕೊಂಡಿರುವ ಹಲವಾರು ಮಂದಿಗೆ ಇದೊಂದು ಸುಸಮಯ.

-ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.