ದೀಪಾವಳಿ ಹಬ್ಬದ ಕಾರಣ, ಅ. 27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸದಂತೆ ಗುಜರಾತ್ ಸರ್ಕಾರ ಪೊಲೀಸರಿಗೆ ನಿರ್ದೇಶನ ನೀಡಿದೆ (ಪ್ರ.ವಾ., ಅ. 23). ನಮ್ಮಲ್ಲಿ ದೀಪಾವಳಿಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ಧಿಗಾಗಿ ಬಗೆಬಗೆಯ ಆಶ್ವಾಸನೆ ಹಾಗೂ ಉಡುಗೊರೆಗಳನ್ನು ಕೊಟ್ಟರೆ, ಗುಜರಾತ್ ಸರ್ಕಾರ ಹೊಸ ಬಗೆಯ ‘ಉಡುಗೊರೆ’ ದಯಪಾಲಿಸಿದೆ. ಇದರಿಂದ ಎಷ್ಟೆಲ್ಲ ಅಪಘಾತಗಳು ಉಂಟಾಗುತ್ತವೋ ನಂತರ ಫಲಿತಾಂಶ ತಿಳಿಯುತ್ತದೆ. ಸಂಚಾರ ಉಲ್ಲಂಘನೆಯನ್ನೇ ರೂಢಿ ಮಾಡಿಕೊಂಡಿರುವ ಹಲವಾರು ಮಂದಿಗೆ ಇದೊಂದು ಸುಸಮಯ.
-ಬಾಲಕೃಷ್ಣ ಎಂ.ಆರ್.,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.