ನನಗೆ ಬೇಕಾದ ಔಷಧಿ ತರಲೆಂದು ಇತ್ತೀಚೆಗೆ ಮನೆಯಿಂದ ಹೊರಗೆ ಹೋಗಿದ್ದೆ. ದಾವಣಗೆರೆ ನಗರವಾಸಿಗಳೊಂದಿಗೆ ಸುತ್ತಲಿರುವ ಗ್ರಾಮೀಣ ಜನರೂ ಒಬ್ಬೊಬ್ಬರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಜನೌಷಧಿ ಕೇಂದ್ರದ ಬಳಿ ಅಲ್ಲಲ್ಲಿ ನಿಂತಿದ್ದರು. ಇನ್ನೂ ಔಷಧ ಕೇಂದ್ರ ತೆರೆದಿರಲಿಲ್ಲ. ಲಾಕ್ಡೌನ್ನಿಂದಾಗಿ ಬೇಕೆಂದಾಗ ಹೊರಗೆ ಹೋಗುವಂತಿಲ್ಲವಾದ್ದರಿಂದ, ಜನೌಷಧಿ ಕೇಂದ್ರಗಳು ಬೆಳಿಗ್ಗೆ 7ರಿಂದಲೇ ತೆರೆಯುವಂತೆ, ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ನಿರ್ದಿಷ್ಟ ಸಮಯದಲ್ಲಿ ಇವು ಕಾರ್ಯ ನಿರ್ವಹಿಸುವಂತೆ ಮಾಡಿದರೆ ಸಾಮಾನ್ಯ ಜನರಿಗೆ
ಅನುಕೂಲವಾಗುತ್ತದೆ.
-ರಘುನಾಥರಾವ್ ತಾಪ್ಸೆ, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.