ADVERTISEMENT

ಇಂಗ್ಲಿಷ್‌ ಮಾಧ್ಯಮ: ಸಾಧಕರಿಗೆ ಅವಮಾನ

ಚಂದ್ರಶೇಖರ ಮಂಚನಹಳ್ಳಿ ಕೆ.ಆರ್‌.ನಗರ
Published 6 ಜನವರಿ 2019, 20:15 IST
Last Updated 6 ಜನವರಿ 2019, 20:15 IST

ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂಬ ಹೋರಾಟ ರಾಜ್ಯದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದೆ. ಆದರೆ ಸರ್ಕಾರವು ಈ ಆಶಯಕ್ಕೆ ವಿರುದ್ಧವಾಗಿ, ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿದೆ. ಇದು ದುರಂತವೇ ಸರಿ.

ಕನ್ನಡ ಮಾಧ್ಯಮದಲ್ಲಿ ಓದಿದರೆ ಮಕ್ಕಳು ಏಳಿಗೆ ಆಗುವುದಿಲ್ಲ ಎಂಬ ನಂಬಿಕೆ ಅದು ಹೇಗೆ ಗಟ್ಟಿಗೊಂಡಿತೋ ಗೊತ್ತಿಲ್ಲ. ಇದನ್ನು ಒಪ್ಪಲಾಗದು. ಐದನೇ ತರಗತಿಯಿಂದ ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಓದಿದ ಎಚ್.ಡಿ. ದೇವೇಗೌಡರು ದೇಶದ ಪ್ರಧಾನಿಯಾಗಲಿಲ್ಲವೇ? ಸರ್ ಎಂ. ವಿಶ್ವೇಶ್ವರಯ್ಯ ಅವರು ‘ಭಾರತರತ್ನ’ ಎನಿಸಲಿಲ್ಲವೇ? ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ತೆರೆಯುವ ಸರ್ಕಾರದ ನಿರ್ಧಾರವು ಕನ್ನಡ ಮಾಧ್ಯಮದಲ್ಲೇ ಕಲಿತು ರಾಷ್ಟ್ರದ, ಜಗತ್ತಿನ ಗಮನ ಸೆಳೆದಿರುವ ಇಂಥ ಅನೇಕ ಮಹನೀಯರಿಗೆ ಮಾಡಿದ ಅವಮಾನವೇ ಸರಿ!

ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್‌ ಮಾಧ್ಯಮದ ಬೋಧನೆ ಅಗತ್ಯ ಎಂದು ಸರ್ಕಾರ ಭಾವಿಸುವುದಾದರೆ, ಅದರ ಜೊತೆಯಲ್ಲೇ ಇನ್ನೂ ಕೆಲವು ನಿರ್ಧಾರಗಳನ್ನು ಕೈಗೊಳ್ಳುವುದು ಅಗತ್ಯ. ಅವುಗಳೆಂದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಮುಚ್ಚುವುದು, ಕನ್ನಡ ಸಾಹಿತ್ಯ ಪರಿಷತ್ತನ್ನು ಮುಚ್ಚುವುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಮುಚ್ಚುವುದು, ಎಲ್ಲಾ ಕನ್ನಡ ಪರ ಸಂಘಟನೆಗಳನ್ನು ನಿಷೇಧಿಸುವುದು, ಎಲ್ಲಾ ಇಲಾಖೆಗಳಲ್ಲೂ ಇಂಗ್ಲಿಷ್‌–ಕನ್ನಡ ಭಾಷಾಂತರಕಾರರನ್ನು ನೇಮಿಸುವುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.