ADVERTISEMENT

ನಾಲಿಗೆಗೆ ನಿಯಂತ್ರಣ ಅಗತ್ಯ

ತಿಮ್ಮೇಶ ಒ.ಮುಸ್ಟೂರುಜಗಳೂರು
Published 10 ಜನವರಿ 2019, 20:15 IST
Last Updated 10 ಜನವರಿ 2019, 20:15 IST

ನಮ್ಮ ಕ್ರಿಕೆಟ್‌ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರು ಮಹಿಳೆಯರ ಬಗ್ಗೆ ಟಿ.ವಿ. ಕಾರ್ಯಕ್ರಮವೊಂದರಲ್ಲಿ ಕೇವಲವಾಗಿ ಮಾತನಾಡಿದ್ದು ವರದಿಯಾಗಿದೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿರುವುದು ಸಹಜ.

ಕ್ರೀಡೆ ಯಾವುದೇ ಇರಲಿ, ಒಂದು ದೇಶವನ್ನು ಪ್ರತಿನಿಧಿಸುವ ಆಟಗಾರರು ತಮ್ಮ ದೇಶದ ಆಚಾರ- ವಿಚಾರ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಅರಿತು ವರ್ತಿಸಬೇಕು. ಇದನ್ನು ಮರೆತು ನಾಲಿಗೆಯನ್ನು ಹರಿಬಿಟ್ಟ ಈ ಇಬ್ಬರು ಆಟಗಾರರ ವಿರುದ್ಧ ಬಿಸಿಸಿಐ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು.

ಜೊತೆಗೆ ಕ್ರೀಡಾಂಗಣದ ಹೊರಗೆ ನಡೆ- ನುಡಿಗಳು ಹೇಗಿರಬೇಕು ಎಂಬ ಬಗ್ಗೆ ಯುವ ಆಟಗಾರರಿಗೆ ತರಬೇತಿ ನೀಡುವುದು ಸೂಕ್ತವೆನಿಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.