ADVERTISEMENT

ವಾಚಕರವಾಣಿ | ತಡೆಹಿಡಿದ ಪಿಂಚಣಿ ಬಿಡುಗಡೆಯಾಗಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 19:45 IST
Last Updated 12 ಜುಲೈ 2020, 19:45 IST

ಎರಡು ತಿಂಗಳಿನಿಂದ ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಸೌಲಭ್ಯಗಳನ್ನು ತಡೆಹಿಡಿಯಲಾಗಿದೆ. ಇದನ್ನೇ ಅವಲಂಬಿಸಿರುವ ವೃದ್ಧರು, ಅಂಗವಿಕಲರು ಹಾಗೂ ಈ ಪಿಂಚಣಿಗಳನ್ನು ಪಡೆಯುವ ಇತರರು ಇದರಿಂದ ಸಂಕಷ್ಟದಲ್ಲಿದ್ದಾರೆ.

ಕೋವಿಡ್‌-19ರ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಮತ್ತು ಆಡಳಿತಾಧಿಕಾರಿಗಳು ತಕ್ಷಣ ಇವರ ಸಹಾಯಕ್ಕೆ ಬರಬೇಕು. ತಡೆಹಿಡಿದಿರುವ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಿ, ಈಫಲಾನುಭವಿಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು.

-ಸಂಜೀವಕುಮಾರ ಎಸ್. ನಿಡಗುಂದಾ,ಚಿಂಚೋಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.