ನಾಗರಪಂಚಮಿ ಹಬ್ಬದ ನಿಮಿತ್ತ ಅನೇಕರು ಕಲ್ಲುನಾಗರಗಳಿಗೆ ಇಲ್ಲವೇ ಹುತ್ತದಲ್ಲಿ ಹಾಲು ಸುರಿಯುವುದು ವಾಡಿಕೆ. ಇದು ಅವರವರ ಧಾರ್ಮಿಕ ನಂಬಿಕೆ ಎನ್ನುವುದು ನಿಜ. ಆದರೆ, ವೈಜ್ಞಾನಿಕವಾಗಿ ನೋಡಿದರೆ ಹಾವುಗಳು ಹಾಲನ್ನಾಗಲೀ, ಹಾಲಿನ ಉತ್ಪನ್ನಗಳನ್ನಾಗಲೀ ಸೇವಿಸುವುದಿಲ್ಲ. ಹಾಗಾಗಿ, ಪಂಚಮಿಯಂದು ಪೌಷ್ಟಿಕಾಂಶಗಳ ಆಗರವಾಗಿರುವ ಹಾಲನ್ನು ಹುತ್ತದಲ್ಲಿ ಸುರಿಯುವ ಬದಲು ಹಸಿದವರಿಗೆ ನೀಡುವುದು ಉತ್ತಮ.
- ಬಿಂದುಶ್ರೀ, ಚಿಕ್ಕನಾಯಕನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.