ದುಷ್ಟ ಆಟಗಳಿಂದ ದೂರವಿರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ವಾರಗಳ ಅವಧಿಯಲ್ಲಿ ಮೂರು ಕೊಲೆಗಳಾಗಿವೆ. ಇಲ್ಲಿ ಹತ್ಯೆಗೆ ಒಳಗಾಗಿದ್ದು ಯಾವುದೋ ಒಂದು ಮತ–ಜಾತಿಗೆ ಸೇರಿದ ವ್ಯಕ್ತಿಗಳಲ್ಲ, ಮಾನವೀಯತೆ. ಹರಿದ ನೆತ್ತರು, ಸುರಿದ ಕಣ್ಣೀರಿನ ಬಣ್ಣ ಒಂದೇ. ಮೊದಲು ಮಾನವರಾಗೋಣ .ಸ್ವಾರ್ಥಶಕ್ತಿಗಳ ಹುನ್ನಾರಗಳಿಗೆ ಮುಗ್ಧರು ಮರುಳಾಗುವುದುಬೇಡ. ರಾಜಕೀಯ ದುಷ್ಟ ಆಟಗಳಿಂದ ದೂರವಿದ್ದು, ಶಾಂತಿಯಿಂದ ಸಹಬಾಳ್ವೆ ನಡೆಸಲು ಅಲ್ಲಿನ ಜನ ಪಣ ತೊಡಬೇಕು.
-ಲೋಹಿತ ಹಸೂರೆ,ಚಿಕ್ಕೋಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.