ನಾಗೇಶ ಹೆಗಡೆ ಅವರು ತಮ್ಮ ಲೇಖನದಲ್ಲಿ (ಚರ್ಚೆ, ಆ. 25) ವೈದ್ಯರ ಆತ್ಮಹತ್ಯೆ, ಸಾವು–ನೋವಿನ ಪ್ರಕರಣಗಳ ಬಗ್ಗೆ ಹೇಳುತ್ತ, ಮೃತರಾದ ವೈದ್ಯರಿಗೆ ಮಾಸಾಶನ ಕೊಡುವ ಜಪಾನ್ ಮಾದರಿಯ ಕಾನೂನು ಇಲ್ಲೂ ಜಾರಿಗೆ ಬರುವಂತೆ ಇಲ್ಲಿನ ವೈದ್ಯರು ಒತ್ತಾಯಿಸಬೇಕು ಎಂದಿದ್ದಾರೆ. ಆದರೆ, ಅದರೊಂದಿಗೆ ಜಪಾನ್ ಮತ್ತಿತರ ದೇಶಗಳ ವೈದ್ಯರ ಕಾರ್ಯವೈಖರಿಯನ್ನೂ ತಿಳಿಸಿ, ನಮ್ಮಲ್ಲಿಯ ಅದರಲ್ಲೂ ಸರ್ಕಾರಿ ವೈದ್ಯರ (ಅಪವಾದ ಹೊರತುಪಡಿಸಿ) ಕಾರ್ಯವೈಖರಿಯನ್ನು ಹೋಲಿಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು.
-ಶರಣಗೌಡ,ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.