ADVERTISEMENT

ಹೊಣೆಯರಿಯದ ನೌಕರರು, ಅರೆಬೆಂದ ನಾಯಕತ್ವ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 19:31 IST
Last Updated 15 ಡಿಸೆಂಬರ್ 2020, 19:31 IST

ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೆ ನಡೆದ ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ಆದ ತೊಂದರೆ ಅಷ್ಟಿಷ್ಟಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು, ಜನರಿಂದಲೇ ನಮ್ಮ ಸಂಸ್ಥೆ ನಡೆಯುತ್ತಿರುವುದು ಎಂಬುದನ್ನು ಮನಗಾಣದ ನೌಕರರು ಮತ್ತು ಇನ್ನೊಂದು, ಜನಸಾಮಾನ್ಯರಿಗೆ ಎಷ್ಟು ತೊಂದರೆಯಾದರೂ ಪರವಾಗಿಲ್ಲ ಸ್ವಪ್ರತಿಷ್ಠೆ ಮುಖ್ಯ ಎಂದುಕೊಂಡ ಅರೆಬೆಂದ ನಾಯಕತ್ವ. ನೌಕರರ ಮುಖಂಡರಿಗೆ ಸರ್ಕಾರ ಕೊಟ್ಟಿರುವ ಭರವಸೆಗಳನ್ನು ನೋಡಿದರೆ, ಇವೆಲ್ಲವನ್ನೂ ಕೇವಲ ಮಾತುಕತೆಯ ಮೂಲಕವೇ ಮುಗಿಸಬಹುದಿತ್ತು, ಇಷ್ಟು ದೊಡ್ಡದು ಮಾಡುವ ಅವಶ್ಯಕತೆಯೇ ಇರಲಿಲ್ಲ ಎನಿಸುತ್ತದೆ. ಒಟ್ಟಿನಲ್ಲಿ ಎರಡೂ ಕಡೆಯವರ ಮೂರ್ಖತನಕ್ಕೆ ಬೆಲೆ ತೆತ್ತಿದ್ದು ಮಾತ್ರ ಜನಸಾಮಾನ್ಯರು.

-ನರಸಿಂಹಮೂರ್ತಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT