‘ರಾಜ್ಯದಲ್ಲಿ 149 ನಿಗಮಗಳಿವೆ, ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ (ಪ್ರ.ವಾ., ಡಿ. 14). ಆದರೆ, ರಾಜ್ಯಕ್ಕೆ ಅಷ್ಟೊಂದು ನಿಗಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಸಹಜವಾಗಿ ನಮ್ಮಲ್ಲಿ ಮೂಡುತ್ತದೆ. ನಿಗಮಗಳ ಅಧ್ಯಕ್ಷರ ಸವಲತ್ತುಗಳು ಸಚಿವರಿಗಿಂತ ಕಡಿಮೆಯೇನೂ ಇರುವುದಿಲ್ಲ. ವಾಸ್ತವದಲ್ಲಿ ಇಷ್ಟೊಂದು ನಿಗಮಗಳು ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗಿವೆ.
ಆಳುವ ಪಕ್ಷಗಳ ಅತೃಪ್ತರ ತಾಣಗಳಂತಾಗಿರುವ ನಿಗಮಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಜೊತೆಗೆ ಅನವಶ್ಯಕವಾಗಿ ಸೃಷ್ಟಿಸಿರುವ ನಿಗಮಗಳನ್ನು ರದ್ದು ಮಾಡಬೇಕು. ಉಳಿದ ನಿಗಮಗಳ ಹೊಣೆಯನ್ನು ಸರ್ಕಾರಿ ಅಧಿಕಾರಿಗಳಿಗೆ ವಹಿಸಿ, ಸರ್ಕಾರದ ಆದಾಯ ಸೋರಿಕೆಯನ್ನು ತಡೆಯಬೇಕು.
–ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.