ADVERTISEMENT

ಅಸ್ಪೃಶ್ಯತೆ ನಿವಾರಣೆ ಆಗಲಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 19:45 IST
Last Updated 16 ಜೂನ್ 2019, 19:45 IST

ಕಳೆದ ಮೂರು ವರ್ಷಗಳಲ್ಲಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಯುವಕ ಅಥವಾ ಯುವತಿಯನ್ನು ಮದುವೆಯಾಗಿರುವ ಸವರ್ಣೀಯರ ಸಂಖ್ಯೆಯು ಮೈಸೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅಧಿಕವಾಗಿರುವುದು ವರದಿಯಾಗಿದೆ (ಪ್ರ.ವಾ.,ಜೂನ್‌ 15).ದೇಶದಲ್ಲಿ ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಇದು ಒಳ್ಳೆಯ ಬೆಳವಣಿಗೆ.

ಜಾತಿ ಭೇದ ತೊಲಗಿಸಲು, ಸಮಾಜದಲ್ಲಿ ಸಮಾನತೆ ತರಲು ಅಂತರ್ಜಾತಿ ವಿವಾಹಗಳು ನೆರವಾಗುತ್ತವೆ. ಪರಿಶಿಷ್ಟರನ್ನು ವಿವಾಹವಾಗುವ ಅನ್ಯ ಜಾತಿಯವರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿರುವುದು ಸರಿಯಾದ ಕ್ರಮ.

-ಸಂತೋಷ ಸುಲೇಪೇಟ,ಚಿಂಚೋಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.