ADVERTISEMENT

ಒಳಮೀಸಲಾತಿಗೆ ವಿರೋಧವೇಕೆ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 4 ಸೆಪ್ಟೆಂಬರ್ 2020, 19:45 IST
Last Updated 4 ಸೆಪ್ಟೆಂಬರ್ 2020, 19:45 IST

ಶೋಷಿತ ವರ್ಗಗಳಿಗೆ ಇರುವ ಮೀಸಲಾತಿಯು ಒಂದು ಸಾಂವಿಧಾನಿಕ ಹಕ್ಕು. ಒಳಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಶಾದಾಯಕ ಮಾತುಗಳನ್ನಾಡಿದೆ. ಮೀಸಲಾತಿಗೆ ಎಷ್ಟು ಪ್ರಬಲ ಕಾರಣಗಳಿವೆಯೋ ಒಳಮೀಸಲಾತಿಗೂ ಅಷ್ಟೇ ಪ್ರಬಲ ಕಾರಣಗಳಿವೆ. ಇದರಲ್ಲಿ ಪರ, ವಿರೋಧದ ಪ್ರಶ್ನೆಯೇ ಉದ್ಭವಿಸಬಾರದು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಎಡಗೈಗೆ ಸೇರಿದ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ನಿಗದಿ ಮಾಡಿದೆ ಎಂದು ವರದಿಯಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಜಾತಿಗಳು ಮೀಸಲಾತಿಗೆ ಮೊದಲನೇ ಅರ್ಹತೆ ಹೊಂದಿವೆ. ನಿಜಕ್ಕೂ ಅಸ್ಪೃಶ್ಯತೆಯ ಕರಾಳ ಮುಖದ ಅನುಭವ ಅವರಿಗೆ ಆಗಿರು‌ವಷ್ಟು ಉಳಿದ ಜಾತಿ, ಸಮುದಾಯಗಳಿಗೆ ಆಗಿಲ್ಲ ಎಂದೇ ಹೇಳಬಹುದು.

ಗಿರೀಶ್ ಯರಗಟ್ಟಿಹಳ್ಳಿ, ಹೊದಿಗೆರೆ, ಚನ್ನಗಿರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.