ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ನಗರದಲ್ಲಿ ನಡೆಯುತ್ತಿರುವ `ಶ್ರೀಲಂಕನ್ ಏಡ್' ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಶ್ರೀಲಂಕಾ ಸಂಸ್ಕೃತಿ ಬಿಂಬಿಸುವ ವಸ್ತ್ರಗಳನ್ನು ತೊಟ್ಟು ರ್ಯಾಂಪ್ ಏರಿದವರಲ್ಲಿ ಬಹುತೇಕ ರೂಪದರ್ಶಿಯರು ಬೆಂಗಳೂರಿಗರು. ಹಿಂದೂ ಮಹಾಸಾಗರದ ಕಡು ನೀಲಿ, ದ್ವೀಪ ರಾಷ್ಟ್ರದ ಪ್ರಕೃತಿಯ ಹಸಿರು ಹಾಗೂ ಕಂದು ಬಣ್ಣಗಳು ಎದ್ದುಕಾಣುತ್ತಿದ್ದ ಉಡುಪುಗಳಲ್ಲಿ ರೂಪದರ್ಶಿಯರು ಕಂಗೊಳಿಸಿದರು. ಮಾಜಿ ಕ್ರಿಕೆಟಿಗರಾದ ಅರ್ಜುನ ರಣತುಂಗ ಹಾಗೂ ಸನತ್ ಜಯಸೂರ್ಯ ಈ ಫ್ಯಾಷನ್ ಶೋಗೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.