ಸುಭದ್ರ ಕೋಟೆಯಂಥ ಗೀಜಗನ ಗೂಡಲ್ಲಿ ಮರಿಗಳು ಬೆಚ್ಚಗೆ ಇರುತ್ತವೆ ಎಂದುಕೊಂಡು ಗುಟುಕು ತರಲು ಹೋದ ಅಮ್ಮನಿಗೆ, ಮರಿ ಬೇಟೆ ಆಡಲು ಬಂದಿದ್ದು ನೀಲಿ ಕೊಕ್ಕಿನ ಇಂಡಿಯನ್ ಟ್ರೀ ಪೈ ಎಂಬ ಹಕ್ಕಿ. ಮರಿಗೆ ಗುಟುಕು ತಂದ ಗೀಜಗನಿಗೆ ಮರಿಯೇ ತುತ್ತಾಗುವ ಆಪತ್ತು ಕಂಡು ಆಘಾತ. ಆದರೆ ಚಾಮುಂಡೇಶ್ವರಿ ಬೆಟ್ಟದ ತೊಪ್ಪಲಿನಲ್ಲಿ ಯಾವ ತಾಯಿ ಅಬಲೆಯಾದಾಳು? ಮರಿಗಾಗಿ ಗೂಡಿಗೆ ಬಾಯಿ ಹಾಕಿದ ಹಕ್ಕಿಗೆ ದೂರದಿಂದಲೇ ಜೋರು ಮಾಡಿದ ಅಮ್ಮ, ಇಲ್ಲಿ ಶಿಕಾರಿ ಅಸಾಧ್ಯ ಎನ್ನುವಂತೆ ಮಾಡಿತು. ಗೂಡನ್ನು ಎಲ್ಲೆಡೆಯಿಂದಲೂ ಛಿದ್ರಗೊಳಿಸಲು ಯತ್ನಿಸುತ್ತಿದ್ದ ಆ ಹಕ್ಕಿಗೆ ಅಂದು ಉಪವಾಸವೇ ಗತಿಯಾಯಿತು. ಮರಿ ಶಿಕಾರಿ ಹಾಗೂ ಅಮ್ಮನ ವಿಜಯವನ್ನು ಸೆರೆ ಹಿಡಿದವರು ವಿಶ್ವನಾಥ ಸುವರ್ಣ.