ADVERTISEMENT

ಪ್ರಜಾವಾಣಿ ಕ್ವಿಜ್ 92

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 8 ಅಕ್ಟೋಬರ್ 2019, 19:30 IST
Last Updated 8 ಅಕ್ಟೋಬರ್ 2019, 19:30 IST

1. ತಿಹಾರ್ ಜೈಲಿಗೆ ಆ ಹೆಸರು ಬರಲು ಕಾರಣವೇನು?

ಅ) ಕಟ್ಟಿಸಿದ ವ್ಯಕ್ತಿ ಆ) ಇರುವ ಸ್ಥಳ

ಇ) ದಾನಿಯ ಹೆಸರಿನಿಂದ
ಈ) ಮೊದಲ ಅಧಿಕಾರಿ

ADVERTISEMENT

2. ‘ವೇದಗಳಿಗೆ ಹಿಂದಿರುಗಿ’ ಎಂದು ಕರೆಕೊಟ್ಟ ಸಮಾಜಸುಧಾರಕರು ಯಾರು?

ಅ) ರಾಜಾರಾಂ ಮೋಹನ ರಾಯ್
ಆ) ಅರಬಿಂದೊ
ಇ) ಈಶ್ವರ ಚಂದ್ರ ವಿದ್ಯಾಸಾಗರ್
ಈ) ದಯಾನಂದ ಸರಸ್ವತಿ

3. ಹೆಣ್ಣು ಸಿಂಹಗಳ ಗುಂಪನ್ನು ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತಾರೆ?

ಅ) ಪ್ರೈಡ್ ಆ) ಬಂಚ್ ಇ) ಗ್ರೂಪ್ ಈ) ಹರ್ಡ್

4. ವೆನಿಲ್ಲಾ ಗಿಡದ ಯಾವ ಭಾಗವನ್ನು ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ?

ಅ) ಬೇರು ಆ) ಕಾಂಡ ಇ) ಎಲೆ ಈ)ಕಾಯಿ

5. ಗ್ರೀಕ್ ಪುರಾಣಗಳ ಪ್ರಕಾರ ದೇವಲೋಕದ ಮಹಾರಾಣಿ ಯಾರು?

ಅ) ಹೀರಾ ಆ) ಅಥೀನಾ
ಇ) ಅಫ್ರೊದಿತೆ ಈ) ಆರ್ಟೆನಿಸ್‌

6. ವಾಹನದ ನೋಂದಣಿ ಸಂಖ್ಯೆಯ ಆರಂಭದ ಎರಡು ಅಕ್ಷರಗಳು ಏನನ್ನು ಸೂಚಿಸುತ್ತವೆ?

ಅ) ಊರಿನ ಹೆಸರು ಆ) ಜಿಲ್ಲೆಯ ಹೆಸರು ಇ) ಪ್ರಾಂತ್ಯದ ಹೆಸರು ಈ) ರಾಜ್ಯದ ಹೆಸರು

7. ‘ಬೀಗಲ್‌’ ಎಂಬ ಹೆಸರಿನ ನೌಕೆಯನ್ನು ತನ್ನ ಪರ್ಯಟನೆಗಾಗಿ ಬಳಸಿಕೊಂಡವರು ಯಾರು?

ಅ) ಡಾರ್ವಿನ್ ಆ) ಮೆಗಲನ್

ಇ)ಕೊಲಂಬಸ್ ಈ) ವಾಸ್ಕೋ ಡ ಗಾಮ

8. ಇವುಗಳಲ್ಲಿ ಸಪ್ತ ಮಾತೃಕೆಯರ ಪಟ್ಟಿಯಲ್ಲಿ ಸೇರದಿರುವ ಹೆಸರು ಯಾವುದು?

ಅ) ಕೌಮಾರಿ ಆ) ವಾರಾಹಿ
ಇ) ಇಂದ್ರಾಣಿ ಈ) ಸುಂದರಿ

9. ‘ಅಮೃತ ಮಹೋತ್ಸವ’ ವನ್ನು ಎಷ್ಟು ವರ್ಷಗಳ ಪೂರ್ತಿಯ ನಂತರ ಆಚರಿಸಲಾಗುತ್ತದೆ?

ಅ) ಇಪ್ಪತ್ತೈದು ಆ) ಎಪ್ಪತ್ತೈದು
ಇ) ನೂರು ಈ) ಐವತ್ತು

10. ‘ಇಗೋ ಕನ್ನಡ’ ಎಂಬ ಹೆಸರಿನ ನಿಘಂಟಿನ ಮೂಲಕ ಪ್ರಸಿದ್ಧರಾದ ಹಿರಿಯ ವಿದ್ವಾಂಸರು ಯಾರು?

ಅ) ಡಿ.ಎಲ್. ನರಸಿಂಹಾಚಾರ್
ಆ) ತೀ.ನಂ. ಶ್ರೀ
ಇ) ಜಿ.ವೆಂಕಟಸುಬ್ಬಯ್ಯ
ಈ) ಎನ್. ಬಸವಾರಾಧ್ಯ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಹವಾಮಾನ 2. ಬಚ್ಚಲಿಗೆ 3. ಅರಬಿಂದೊ

4. ಅಂಟುವಾಳ 5. ಕ್ಯಾಲಿಗ್ರಫಿ 6. ಬರೆಯಲು 7.ಹನ್ನೆರಡು 8. ನೀರು 9. ಗೋಧಿ

10. ಭೂಗೋಳ ಶಾಸ್ತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.