ADVERTISEMENT

ಚಾಲೆಂಜರ್‌ ಟ್ರೋಫಿಗೆ ಇರ್ಫಾನ್‌ ಅಲಭ್ಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಗಾಯ­ಗೊಂಡಿರುವ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಅವರು ಮುಂಬರುವ ಎನ್‌ಕೆಪಿ ಸಾಳ್ವೆ ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ.

ಈ ಮೊದಲು ಪ್ರಕಟಿಸಲಾಗಿದ್ದ  ಇಂಡಿಯಾ ತಂಡದಲ್ಲಿ ಇರ್ಫಾನ್‌ ಸ್ಥಾನ ಪಡೆದಿದ್ದರು. ಈಗ ಅವರ ಬದಲಿಗೆ ಕೇರಳದ ಮಧ್ಯಮ ವೇಗದ ಬೌಲರ್‌ ಸಂದೀಪ್‌ ವಾರಿಯರ್‌ ಸ್ಥಾನ ಪಡೆದಿದ್ದಾರೆ. ರೆಡ್‌ ಇಂಡಿಯಾ ತಂಡವನ್ನು ಯೂಸುಫ್‌ ಪಠಾಣ್‌ ಮುನ್ನಡೆಸಲಿದ್ದಾರೆ.

ಆರು ವಾರ ಕಾಲ ಇರ್ಫಾನ್‌ ಲಭ್ಯರಿರುವುದಿಲ್ಲ. ಚಾಲೆಂಜರ್‌ ಟ್ರೋಫಿ ಸೆಪ್ಟೆಂಬರ್‌ 26ರಿಂದ 29ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಇಂಡಿಯಾ ರೆಡ್‌, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್‌ ತಂಡಗಳು ಪೈಪೋಟಿ    ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.