ಹುಬ್ಬಳ್ಳಿ:ಇದೇ 24ರಿಂದ 28ರವರೆಗೆ ನವದೆಹಲಿಯಲ್ಲಿ ನಡೆಯಲಿರುವ 65ನೇ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡಗಳನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಶೈಲ ಎಂ. ಕುರಣಿ ತಿಳಿಸಿದ್ದಾರೆ.
ಪುರುಷ ಹಾಗೂ ಬಾಲಕರ ವಿಭಾಗ: ಶ್ರೀಧರ ಸವಣೂರ, ಶ್ರೀಶೈಲ ಲಾಯನ್ನವರ, ಸದಾಶಿವ ನಾಟಿಕಾರ, ಮಹದೇವ ಹಳಬರ, ಮಾಳಪ್ಪ ಮಾರ್ತನ್ನವರ, ಯಲ್ಲಪ್ಪ ಶಿರಬೂರ ಮತ್ತು ಮಲ್ಲಪ್ಪ ಜಂಬಗಿ, (ಎಲ್ಲರೂ ಬಾಗಲಕೋಟೆ ಜಿಲ್ಲೆಯವರು) ಆಸಿಫ್ ಅತ್ತಾರ (ವಿಜಾಪುರ ಜಿಲ್ಲೆ) ಸಚಿನ್ ಕುರಿಯಾರ (ಗದಗ ಜಿಲ್ಲೆ) ಕಷ್ಣಾ ನಾಯ್ಕೋಡಿ, ಸಚಿನ್ ಪವಾರ, ಶರಣಪ್ಪ ಆರಿ (ಎಲ್ಲರೂ ವಿಜಾಪುರ ಕ್ರೀಡಾ ನಿಲಯ). ಮುತ್ತಪ್ಪ ಮರನೂರ (ತರಬೇತುದಾರ), ಮುತ್ತಪ್ಪ ಕುರಿಯಾರ (ವ್ಯವಸ್ಥಾಪಕರು).
ಮಹಿಳೆಯರು ಮತ್ತು ಬಾಲಕಿಯರ ವಿಭಾಗ: ಸವಿತಾ ಗೌಡರ, ರೂಪಾ ಗೌಡರ, ಶೈಲಾ ಮಟ್ಯಾಳ, ರಾಜೇಶ್ವರಿ ಡುಳ್ಳಿ (ಎಲ್ಲರೂ ಬಾಗಲಕೋಟ ಜಿಲ್ಲೆ) ಶಹೀರಾ ಅತ್ತಾರ, ಶಶಿಕಲಾ ಭಜಂತ್ರಿ (ವಿಜಾಪುರ ಜಿಲ್ಲೆ) ಸೀಮಾ ಆಡಗಲ್, ರೇಣುಕಾ ದಂಡಿನ್, ಸಾವಿತ್ರಿ ಹಿರೇಮಠ (ಕ್ರೀಡಾ ನಿಲಯ ವಿಜಾಪುರ) ಅನಂತ ದೇಸಾಯಿ (ತರಬೇತುದಾರ), ಕಮಲಾ ಕುರಿಯಾರ (ವ್ಯವಸ್ಥಾಪಕರು).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.