ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಕುಸ್ತಿ ಪಟು ಯೋಗೇಶ್ವರ್ ದತ್ ತಮಗೆ ಬರಲಿದ್ದ ಬೆಳ್ಳಿ ಪದಕ ರಷ್ಯಾದ ಬೆಸಿಕ್ ಕುದುಕೊವ್ ಅವರ ಕುಟುಂಬಸ್ಥರಲ್ಲೇ ಉಳಿಯಲಿ ಎಂದಿದ್ದಾರೆ.
ಲಂಡನ್ ಒಲಿಂಪಿಕ್ಸ್ನಲ್ಲಿ ಎರಡನೇ ಸ್ಥಾನ ಪಡೆದಿದ್ದ ರಷ್ಯಾದ ಬೆಸಿಕ್ ಕುದುಕೊವ್ ಅವರು ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾಗಿದೆ. ಇದರಿಂದ ಆಗ ಮೂರನೇ ಸ್ಥಾನ ಪಡೆದಿದ್ದ ಯೋಗೇಶ್ವರ್ ಅವರಿಗೆ ಬೆಳ್ಳಿಯ ಪದಕದ ಅದೃಷ್ಟ ಒಲಿದು ಬಂದಿತ್ತು. ಆದರೆ, ಆ ಪದಕದ ಅವಕಾಶವನ್ನು ಯೋಗೇಶ್ವರ್ ನಯವಾಗಿಯೇ ನಿರಾಕರಿಸಿದ್ದಾರೆ.
‘ಬೆಸಿಕ್ ಕುದುಕೊವ್ ಉತ್ತಮ ಕಸ್ತಿಪಟು. ಅವರು ಸಾವನ್ನಪ್ಪಿದ ಬಳಿಕ ಉದ್ದೀಪನ ಮದ್ದು ಪರೀಕ್ಷೆಯ ವರದಿ ಬಂದಿರುವುದು ದುರಂತ. ಒಬ್ಬ ಕುಸ್ತಿ ಪಟುವಾಗಿ ನಾನು ಅವರನ್ನು ಗೌರವಿಸುತ್ತೇನೆ’ ಎಂದು ಯೋಗೇಶ್ವರ್ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.