ADVERTISEMENT

ಬ್ಯಾಸ್ಕೆಟ್‌ಬಾಲ್: ಗ್ರೀನ್ಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 18:45 IST
Last Updated 1 ಜೂನ್ 2011, 18:45 IST

ಬೆಂಗಳೂರು: ಡಾವಣಗೆರೆ ಗ್ರೀನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಗೆಲುವು ಪಡೆದರು.

ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗ್ರೀನ್ಸ್ ತಂಡ 46-32ಪಾಯಿಂಟ್‌ಗಳಿಂದ ಭಾರತ್ ತಂಡವನ್ನು ಸೋಲಿಸಿತು. ವಿರಾಮಕ್ಕೆ ಮೊದಲು ವಿಜಯಿ ತಂಡ 29-16ಪಾಯಿಂಟ್‌ಗಳ ಮುನ್ನಡೆ ಹೊಂದಿತ್ತು.

ಇದೇ ಚಾಂಪಿಯನ್‌ಷಿಪ್‌ನ ಇತರ ಪಂದ್ಯಗಳಲ್ಲಿ ಹುಲಸೂರು ತಂಡ 56-34ರಲ್ಲಿ ಕನಕ ಕೋಲಾರ ತಂಡದ ಎದುರೂ, ಜೆಎಸ್‌ಸಿ ತಂಡ 47-23 ಪಾಯಿಂಟ್‌ಗಳಿಂದ ಸ್ಪೋರ್ಟ್ಸ್ ಹಾಸ್ಟೆಲ್ ಮೇಲೂ ವಿಜಯ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆಯಿತು.

ವಿಜಯಿ ತಂಡ ಆರಂಭದಿಂದಲೂ ಪಾಯಿಂಟ್ ಗಳಿಕೆಯಲ್ಲಿ ಮುಂದಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.