ADVERTISEMENT

ಆನಂದ್ ಕೃಪಾಲು ಆರ್‌ಸಿಬಿ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 17:44 IST
Last Updated 18 ಸೆಪ್ಟೆಂಬರ್ 2020, 17:44 IST
 ಆರ್‌ಸಿಬಿ ಲಾಂಛನ
 ಆರ್‌ಸಿಬಿ ಲಾಂಛನ   

ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರ್ಯಾಂಚೈಸಿಯ ನೂತನ ಮುಖ್ಯಸ್ಥರಾಗಿ ಆನಂದ್ ಕೃಪಾಲು ನೇಮಕವಾಗಿದ್ದಾರೆ.

ಪ್ರಸ್ತುತ ಮುಖ್ಯಸ್ಥರಾಗಿರುವ ಸಂಜಯ್ ಚೂರಿವಾಲಾ ಅವರಿಂದ ಅಕ್ಟೋಬರ್ 1ರಂದು ಆನಂದ್ ಅಧಿಕಾರ ಸ್ವೀಕರಿಸುವರು. ಚೂರಿವಾಲಾ ಅವರು ಸಿಂಗಪುರದಲ್ಲಿರುವ ಎಪಿಎಸಿ ರಿಜನ್‌ನ ಹಣಕಾಸು ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಆನಂದ್ ಕೃಪಾಲು ಅವರು ಡಿಯಾಜಿಯೊ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿಯೂ ಆಗಿದ್ದಾರೆ.

ADVERTISEMENT

‘ಆರ್‌ಸಿಬಿಯು ಡಿಯಾಜಿಯೊ ಇಂಡಿಯಾದ ಒಂದು ಅಂಗವಾಗಿದೆ. ಹೋದ ಆರು ವರ್ಷಗಳಿಂದ ಈ ತಂಡದ ಪಯಣದಲ್ಲಿ ನಾನು ಜೊತೆಯಾಗಿದ್ದೇನೆ. ಐಪಿಎಲ್‌ನ ಹೊಸ ಋತು ಆರಂಭವಾಗುತ್ತಿದೆ. ನಾಯಕ ವಿರಾಟ್ ಜೊತೆಗೆ ಕೋಚ್ ಮೈಕ್ ಹೆಸನ್ ಮತ್ತು ಸೈಮನ್ ಕ್ಯಾಟಿಚ್ ಅವರೊಂದಿಗೆ ಕಾರ್ಯನಿರ್ವಹಿಸಲು ಖುಷಿಯಾಗಿದೆ’ ಎಂದು ಆನಂದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.