ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಾಹುಲ್ ಜೊಹ್ರಿ ಅವರು ಬುಧವಾರ ಲಿಂಗ ಸಂವೇದನೆ ಜಾಗೃತಿ ಕುರಿತ ಸಮಾಲೋಚನೆಗೆ ಹಾಜರಾದರು.
ಹೋದ ನವೆಂಬರ್ನಲ್ಲಿ ರಾಹುಲ್ ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿದ್ದರು. ಆ ಸಂದರ್ಭದಲ್ಲಿ ವಿಚಾರಣೆ ನಡೆಸಿದ್ದ ಸಮಿತಿಯಲ್ಲಿದ್ದ ವೀಣಾ ಸಿಂಗ್ ಅವರು ರಾಹುಲ್ ಅವರು ಲಿಂಗ ಸಂವೇದನೆ ಕುರಿತ ಕೌನ್ಸಿಲಿಂಗ್ಗೆ ಹಾಜರಾಗಬೇಕು ಎಂದು ಶಿಫಾರಸು ಮಾಡಿದ್ದರು. ಸಮಿತಿಯಲ್ಲಿ ನ್ಯಾಯಮೂರ್ತಿ ರಾಕೇಶ್ ಶರ್ಮಾ ಮತ್ತು ಬರ್ಕಾ ಸಿಂಗ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.